Advertisement

ಗಣೇಶ ಚರ್ತುರ್ಥಿಗೆ ಮಂಗಳೂರಿನಲ್ಲಿ ಭರದ ಸಿದ್ಧತೆ

10:43 AM Sep 01, 2019 | sudhir |

ಮಂಗಳೂರು: ಗಣೇಶ ಚತುರ್ಥಿಗೆ ಇನ್ನೊಂದು ದಿನ ಬಾಕಿ ಇದ್ದು ನಗರದಾದ್ಯಂತ ವಿಶೇಷ ಸಿದ್ಧತೆಗಳು ಆರಂಭವಾಗಿವೆ.

Advertisement

ದೇವಸ್ಥಾನ, ಕೆಲವೊಂದು ಸಂಘ-ಸಂಸ್ಥೆಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೂ ಬಿರುಸಿನ ತಯಾರಿಯಲ್ಲಿ ತೊಡಗಿವೆ. ಪ್ಲಾಸ್ಟರ್‌ಆಫ್‌ ಪ್ಯಾರಿಸ್‌ ಗಣಪನ ಮೂರ್ತಿ ಆರಾಧನೆ ಮಾಡಬಾರದು ಎಂಬ ನಿಯಮ ಇರುವುದರಿಂದ ಎಲ್ಲೆಡೆ ಪರಿಸರಸ್ನೇಹಿ ಗಣಪನಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಗಣೇಶ ಚತುರ್ಥಿ ಹಿನ್ನಲೆಯಲ್ಲಿ ತರಕಾರಿ, ಹಣ್ಣು ಹಂಪಲುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಸ್ಥಳೀಯವಾಗಿಯಲ್ಲದೆ, ಮಂಡ್ಯ, ಬೆಂಗಳೂರು, ಹುಬ್ಬಳ್ಳಿ, ಉತ್ತರ ಕರ್ನಾಟಕ ಭಾಗದಿಂದ ಹೂವು, ಹಣ್ಣು, ತರಕಾರಿಗಳು ನಗರಕ್ಕೆ ಬಂದಿದೆ.

ಗೌರಿ ಹಬ್ಬ
ದ.ಕ. ಜಿಲ್ಲೆಯಲ್ಲಿ ಗೌರಿ ಹಬ್ಬಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲದೆ ಇದ್ದರೂ ಕೆಲವೆಡೆ ಗೌರಿ ಹಬ್ಬಕ್ಕೆ ಸಿದ್ಧತೆಗಳು ನಡೆದಿದೆ. ಹೆಂಗಳೆಯರ ನೆಚ್ಚಿನ ಹಬ್ಬ ಗೌರಿಹಬ್ಬಕ್ಕಾಗಿ ಮನೆಗಳಲ್ಲಿ ತಯಾರಿ ಜೋರಾಗಿದೆ. ಇದಕ್ಕಾಗಿ ಕಂಕನಾಡಿ, ಬಿಜೈ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಮುಂಭಾಗ, ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್‌ ಮುಂತಾದೆಡೆ ಹೂವು ಮಾರಾಟಗಾರರು ಉತ್ತರ ಕನ್ನಡ ಭಾಗಗಳಿಂದ ಆಗಮಿ ಸಿದ್ದು, ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next