Advertisement

Chittapura: ಧಾರಾಕಾರ ಮಳೆಗೆ ಮನೆಯ ಮೇಲೆ ಕುಸಿದು ಬಿದ್ದ ಗುಡ್ಡ… ತಪ್ಪಿದ ಅನಾಹುತ

11:35 AM Sep 02, 2024 | Team Udayavani |

ಚಿತ್ತಾಪುರ: ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮನೆಯ ಮೇಲೆ ಗುಡ್ಡ ಕುಸಿದು ಅಪಾರ ಹಾನಿಯಾಗಿದ್ದು ಯಾವುದೇ ಸಾವು ನೋವು ಸಂಭವಿಸಿಲ್ಲ ಎನ್ನಲಾಗಿದೆ.

Advertisement

ತಾಲೂಕಿನ ಅಲ್ಲೂರ್ ಬಿ ಗ್ರಾಮದಲ್ಲಿನ ಚನ್ನಪ್ಪ ಎನ್ನುವವರಿಗೆ ಸೇರಿದ ಮನೆಯ ಮೇಲೆ ಗ್ರಾಮದ ಗುಡ್ಡ ಕುಸಿದ ಪರಿಣಾಮವಾಗಿ ಗುಡ್ಡದಲ್ಲಿನ ದೊಡ್ಡ ದೊಡ್ಡ ಗಾತ್ರದ ಕಲ್ಲುಗಳು ಬಿದ್ದು ಮನೆ ಪೂರ್ತಿ ಧ್ವಂಸವಾಗಿದೆ ಅಲ್ಲದೆ ಮನೆಯ ಸಾಮಾಗ್ರಿಗಳು ಧ್ವಂಸವಾಗಿದ್ದಲ್ಲದೆ. ದವಸ ಧಾನ್ಯಗಳು ಸಹಿತ ಹಾಳಾಗಿ ಹೋಗಿದ್ದು ಸುಮಾರು ಏಳು ಲಕ್ಷ ರೂ. ನಷ್ಟು ಹಾನಿ ಆಗಿ ಮನೆಯಲ್ಲಿ ಸಿಲುಕಿದ ಒಬ್ಬ ಬಾಲಕನಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ ಎಂದು ಮನೆಯವರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ನಿರ್ಬಂಧದ ನಡುವೆ ಎತ್ತಿನ ಭುಜಕ್ಕೆ ಪ್ರವಾಸಿಗರ ಭೇಟಿ.. ಅರಣ್ಯ ಸಚಿವರ ಮಾತಿಗೂ ಕಿಮ್ಮತ್ತಿಲ್ಲ!

Advertisement

Udayavani is now on Telegram. Click here to join our channel and stay updated with the latest news.

Next