Advertisement

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

03:14 PM Mar 29, 2024 | Team Udayavani |

ಚಿತ್ರದುರ್ಗ: ಎಂಟು ಕ್ಷೇತ್ರಗಳ ಕಾರ್ಯಕರ್ತರು ನಮಗೆ ಬೆಂಬಲ ಕೊಟ್ಟಿದ್ದಾರೆ. ಮುಂದಿನ ನಡೆಯ ಬಗ್ಗೆ ನಾನು ತೀರ್ಮಾನ ಮಾಡುವೆ. ಎ.3ರಂದು ನಾವು ನಾಮಪತ್ರ ಸಲ್ಲಿಸುವುದು ಖಂಡಿತ ಎಂದು ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಹೇಳಿದರು.

Advertisement

ಬೆಂಬಲಿಗರು, ಕಾರ್ಯಕರ್ತರ ಸಭೆ ಬಳಿಕ ಮಾತನಾಡಿದ ಅವರು, ಇನ್ನೂ ಕಾಲ ಮಿಂಚಿಲ್ಲ, ನಾವು ಟಿಕೆಟ್ ಮತ್ತೆ ಕೇಳಿದ್ದೇವೆ. ನಾವು ಖಂಡಿತ ನಾಮಿನೇಷನ್ ಮಾಡುತ್ತೇವೆ. ನಾನು ಸಿನಿಯರ್ ರಾಜಕಾರಣಿ, ನಮ್ಮ ನೋವು ಅರ್ಥವಾಗಿದೆ. ಮಗನನ್ನು ಚುನಾವಣೆಗೆ ನಿಲ್ಲಿಸಲು ಕಾರಜೋಳ ಕೂಡಾ ನಮಗೆ ಹೇಳಿದ್ದರು ಎಂದರು.

ನನ್ನ ಕಾರ್ಯಕರ್ತರೇ ನನಗೆ ತುಂಬಾ ಮುಖ್ಯ. ನನ್ನ ವಿರುದ್ದ ಪಕ್ಷ ಯಾವುದೇ ಕ್ರಮ ಕೈಗೊಂಡರು ಕೂಡಾ ನಾನು ಸಿದ್ದ. ಸಿದ್ದವಿಲ್ಲದೆ ಇಷ್ಟೆಲ್ಲಾ ನಾವು ಮಾಡುತ್ತೇವಾ? ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ ಎಂದು ಚಂದ್ರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next