Advertisement

ಚಿತ್ರದುರ್ಗ:ವಿಷಕಾರಿ ಹಾವು ಕಚ್ಚಿ ಒಂದೇ ಕುಟುಂಬದ ಮೂವರ ಸಾವು 

09:21 AM Jul 11, 2017 | |

ಹಿರಿಯೂರು: ಇಲ್ಲಿನ ಕಂಡೇನ ಪಾಳ್ಯ ಎಂಬಲ್ಲಿ  ವಿಷಕಾರಿ ಹಾವು ಕಡಿದು 24 ಗಂಟೆಗಳ ಒಳಗೆ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. 

Advertisement

ಸೋಮವಾರ ಬೆಳಗಿನ ಜಾವ ಕೀರ್ತನಾ ಎಂಬ ಮೂರು ವರ್ಷದ ಬಾಲಕಿ ತೀವ್ರ ಅಸ್ವಸ್ಥಗೊಂಡಿದ್ದಳು. ಆಕೆಯನ್ನು ಹಿರಿಯೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಾಗ ಕೊನೆಯುಸಿರೆಳೆದಿದ್ದಳು. ಅಷ್ಟರಲ್ಲೇ ತಾಯಿ ಕೀರ್ತನಾ (23) ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ರಾತ್ರಿ ಮನೆಯಲ್ಲಿದ್ದ ಮಾವ ಮಡ್ನಪ್ಪ (65) ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. 

ಸಾಯುವ ವೇಳೆ ಬಾಯಲ್ಲಿ ನೊರೆ ಬಂದ ಕಾರಣ ವಿಷ ಜಂತು ಕಡಿದಿರುವ ಶಂಕೆಯನ್ನು  ವೈದ್ಯರು ವ್ಯಕ್ತಪಡಿಸಿದ್ದಾರೆ. 

ವೈದ್ಯರು ವಿಷಯ ತಿಳಿಸಿದ ಕೂಡಲೇ ಗ್ರಾಮಸ್ಥರು ಮನೆಯನ್ನು ಜಾಲಾಡಿದ್ದು ಈ ವೇಳೆ ವಿಷಕಾರಿ ಕನ್ನಡಿ ಹಾವು ಪತ್ತೆಯಾಗಿದೆ. ಅದನ್ನು ಗ್ರಾಮಸ್ಥರು ಬಡಿದು ಕೊಂಡಿದ್ದಾರೆ. 

ಮೂವರ ಶವಗಳನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ಬಗ್ಗೆ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next