Advertisement

ಮನಸು ಮಲಗಿದರೆ ಇಂದ್ರೀಯಗಳೂ ನಿಷ್ಕ್ರಿಯ

05:18 PM Feb 26, 2022 | Team Udayavani |

ಚಿತ್ರದುರ್ಗ: ಮಠ-ಮಂದಿರಗಳಲ್ಲಿ ನಡೆಯುವಸತ್ಸಂಗಗಳು ಮನಸ್ಸಿಗೆ ಸಂಸ್ಕಾರ ನೀಡುತ್ತವೆ. ಶಿವರಾತ್ರಿನೆಪದಲ್ಲಿ ಕತ್ತಲು ತೊಡೆದು ಬೆಳಕು ನೀಡುವಪ್ರಯತ್ನ ಶಿವರಾತ್ರಿ ಮಹೋತ್ಸವದಲ್ಲಿ ಆಗುತ್ತಿದೆಎಂದು ಆದಿಚುಂಚನಗಿರಿ ಮಠದ ಡಾ| ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ನಗರದ ಸದ್ಗುರು ಕಬೀರಾನಂದ ಆಶ್ರಮದಲ್ಲಿಶುಕ್ರವಾರ ಆಯೋಜಿಸಿದ್ದ 92ನೇ ಶಿವರಾತ್ರಿಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಮನಸು ಮಲಗಿದರೆ ಇಂದ್ರಿಯಗಳೂನಿಷ್ಕ್ರಿಯಗೊಳ್ಳುತ್ತವೆ. ಮನಸ್ಸನ್ನು ಪಳಗಿಸುವ ಕಲೆಯನ್ನುಇಂತಹ ಕಾರ್ಯಕ್ರಮಗಳು ಹೇಳಿಕೊಡುತ್ತವೆ. ಶುದ್ಧತೆಹಾಗೂ ಜ್ಞಾನ ಬಂದರೆ ಜಗತ್ತನ್ನು ಮಾಯೆ ಎಂದುಪರಿಗಣಿಸುವುದಿಲ್ಲ. ಆಗ ಕೆಟ್ಟದ್ದು ಕೂಡ ಒಳ್ಳೆಯದಂತೆಕಾಣುತ್ತದೆ ಎಂದರು.ಜೀವನದ ಅಂಧಕಾರ ತೊಡೆದುಹಾಕಿ ಬೆಳಕುನೀಡಲು ಮನಸಿಗೆ ಸಂಸ್ಕಾರದ ಅಗತ್ಯವಿದೆ. ನಮ್ಮ ದೇಹಕ್ಕೆಆಹಾರದಿಂದ ಶೇ.40ರಷ್ಟು ಶಕ್ತಿ, ಉಸಿರಾಟದಿಂದಶೇ.60ರಷ್ಟು ಶಕ್ತಿ ದೇಹಕ್ಕೆ ಸಿಗುತ್ತದೆ.

ಮನಸ್ಸು ಹೇಳಿದಹಾಗೆ ಜಗತ್ತು ನಡೆಯುತ್ತಿದೆ. ದೇಹದ ಇಂದ್ರಿಯಗಳುಕೆಲಸ ಮಾಡಲು ಸಂಸ್ಕಾರಗೊಂಡ ಮನಸುಬೇಕಾಗುತ್ತದೆ. ಮನಸ್ಸು ಮಲಿನವಾಗಿದೆ. ಮಲಿನಮನಸ್ಸು ಇಟ್ಟುಕೊಂಡು ಸಂಸಾರ ಮಾಡಬಾರದು. ನಿತ್ಯಮೂರು ಹೊತ್ತು ಊಟ ಹಾಕಿ ದೇಹ ಬೆಳೆಸಿದ್ದೇವೆ. ಆದರೆ,ಮನಸು ಬೆಳೆಸುವತ್ತ ಗಮನ ಹರಿಸಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next