Advertisement

ಚನ್ನವೀರ ಕಣವಿ ನಿಧನಕ್ಕೆ ಮುರುಘಾ ಶ್ರೀ ಸಂತಾಪ

12:36 PM Feb 17, 2022 | Team Udayavani |

ಚಿತ್ರದುರ್ಗ: ಕನ್ನಡ ಸಾರಸ್ವತ ಲೋಕದ ಹಿರಿಯ ಸಾಹಿತಿ,ಮಾರ್ಗದರ್ಶಕ ಡಾ| ಚನ್ನವೀರ ಕಣವಿ ನಿಧನಕ್ಕೆ ಮುರುಘಾಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಸಂತಾಪವ್ಯಕ್ತಪಡಿಸಿದ್ದಾರೆ. “ಕನ್ನಡದ ಸಮನ್ವಯದ ಕವಿ’ ಎಂದೇ ಪ್ರಸಿದ್ಧರಾಗಿದ್ದಕಣವಿಯವರು ಏಳು ದಶಕಗಳಿಂದ ಸಾಹಿತ್ಯ ಲೋಕದಲ್ಲಿ ಅಪಾರಸೇವೆ ಸಲ್ಲಿಸಿದ್ದಾರೆ.

Advertisement

ಅವರ ಹೃದಯ ವೈಶಾಲ್ಯತೆ ಮತ್ತು ಅನನ್ಯವಾದಪ್ರತಿಭೆ ಎಂಥವರನ್ನೂ ಆಕರ್ಷಿಸುತ್ತಿತ್ತು. ಸ್ನೇಹಜೀವಿಯಾಗಿದ್ದ ಕಣವಿಸಾಹಿತ್ಯ ಕೃಷಿಯನ್ನು ನಿರಂತರವಾಗಿಸಿಕೊಂಡು ಕೊನೆಯವರೆಗೂಬರವಣಿಗೆ ನಿಲ್ಲಿಸಿದವರಲ್ಲ. ದಾವಣಗೆರೆ ವಿರಕ್ತಮಠದಲ್ಲಿ 2016ರಲ್ಲಿನಡೆದ ಪೀಠಾರೋಹಣ ಬೆಳ್ಳಿಹಬ್ಬ ಮತ್ತು ಶರಣ ಸಂಸ್ಕೃತಿ ಉತ್ಸವಸಂದರ್ಭದಲ್ಲಿ ಅವರನ್ನು ಸನ್ಮಾನಿಸಿದ್ದನ್ನು ಸ್ಮರಿಸಿಕೊಂಡಿರುವಮುರುಘಾ ಶರಣರು, ಇತ್ತೀಚೆಗೆ ಧಾರವಾಡದ ಎಸ್‌ಡಿಎಂಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದೆವು.

ಅವರನಿಧನದಿಂದ ಕುಟುಂಬಕ್ಕೆ ಉಂಟಾಗಿರುವ ನೋವನ್ನು ಭರಿಸುವಶಕ್ತಿಯನ್ನು ಬಸವಾದಿ ಪ್ರಮಥರು ಕರುಣಿಸಲಿ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next