Advertisement

ವಿದ್ಯಾರ್ಥಿಗಳು ಸನ್ನಡತೆ ರೂಢಿಸಿಕೊಳ್ಳಲಿ

05:25 PM Feb 05, 2022 | Team Udayavani |

ಚಿತ್ರದುರ್ಗ: ಭಾರತ ಸಂಸ್ಕೃತಿವಿಷಯದಲ್ಲಿ ಇಡೀ ಪ್ರಪಂಚಕ್ಕೆಮಾದರಿ. ವಿದ್ಯಾರ್ಥಿಗಳುಸನ್ನಡತೆ ರೂಢಿಸಿಕೊಂಡರೆ ದೇಶದಹಿರಿಮೆ-ಗರಿಮೆ ಎತ್ತಿ ಹಿಡಿದಂತಾಗುತ್ತದೆಎಂದು ವೈದ್ಯ ಡಾ| ನಾರಾಯಣ ರೆಡ್ಡಿ ಹೇಳಿದರು.

Advertisement

ತಾಲೂಕಿನ ಐನಹಳ್ಳಿ ಕುರುಬಹಟ್ಟಿಸರ್ಕಾರಿ ಶಾಲೆಗೆ ಭೇಟಿ ನೀಡಿಮಕ್ಕಳಿಗೆ ನೀರಿನ ಬಾಟಲಿಗಳನ್ನುವಿತರಿಸಿ ಮಾತನಾಡಿದ ಅವರು,ನಾವು ಇತಿಹಾಸವನ್ನು ಅರಿಯಬೇಕು.ಶಾಲಾ-ಕಾಲೇಜುಗಳಲ್ಲಿ ಭಾರತೀಯಸಂಸ್ಕೃತಿ ಪರಿಚಯಿಸುವಕಾರ್ಯಕ್ರಮಗಳು ನಡೆಯಬೇಕು ಎಂದರು.

ಪ್ರಾರ್ಥನೆ ಮಾಡುವತುಟಿಗಳಿಗಿಂತ ಸೇವೆ ಮಾಡುವ ಕೈಗಳುಶ್ರೇಷ್ಠ ಎನ್ನುವಂತೆ ಮಹಾತ್ಮ ಗಾಂಧಿಧೀಜಿಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು.ಅವರ ಸಪ್ತಶೀಲ ಮಾರ್ಗವನ್ನು ಎಲ್ಲರೂಅನುಸರಿಸಿದರೆ ಬದುಕು ಹಸನಾಗುತ್ತದೆ.ನಮ್ಮ ಆರೋಗ್ಯಚೆನ್ನಾಗಿದ್ದರೆ ಮಾತ್ರ ಏನಾದರೂ ಸಾಧಿಸಲು ಸಾಧ್ಯ. ಮಕ್ಕಳು ಬಿಸಿಲಿನಲ್ಲಿ ಹೆಚ್ಚುಆಟವಾಡಿದರೆ ವಿಟಮಿನ್‌ ಡಿ ಸಿಗುತ್ತದೆ.

ಪ್ರತಿ ದಿನ 3ರಿಂದ 5 ಲೀಟರ್‌ ನೀರುಕುಡಿಯಿರಿ. ಮಲಗುವ ಮೂರು ತಾಸುಮುಂಚಿತವಾಗಿ ಊಟ ಮಾಡಿದರೆಮಾರನೇ ದಿನ ಉಲ್ಲಾಸದಿಂದ ಇರಲುಸಾಧ್ಯ ಎಂದು ಸಲಹೆ ನೀಡಿದರು. ಮುಖ್ಯಶಿಕ್ಷಕ ಎಚ್‌.ಎನ್‌. ಮಂಜಪ್ಪ,ಶಿಕ್ಷಕರಾದ ಸಿ. ರೇವಣ್ಣ, ಡಿ.ಎನ್‌.ಗೋವಿಂದಪ್ಪ, ವೈ. ಪಾರ್ವತಮ್ಮ,ಮಂಜುಳಾ ಕಿಲ್ಲೇದಾರ, ಎಂ.ಎಚ್‌.ಮಂಜುಳಾ, ಎಂ.ಜೆ. ಕೋಕಿಲಾಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next