Advertisement

ನಿಸಾರ್‌ ನಾಡು ಕಂಡ ಶ್ರೇಷ್ಠ ಕವಿ

01:34 PM May 04, 2020 | Naveen |

ಚಿತ್ರದುರ್ಗ: ಕನ್ನಡ ನಾಡು ನುಡಿ ಬಗ್ಗೆ ಅನನ್ಯ ಪ್ರೀತಿ, ಕಾಳಜಿ ಇಟ್ಟುಕೊಂಡು “ನಿತ್ಯೋತ್ಸವ ಕವಿ’ ಎಂದೇ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದ ಪ್ರೊ| ನಿಸಾರ್‌ ಅಹಮ್ಮದ್‌ ಅಗಲಿಕೆಗೆ ಡಾ| ಶಿವಮೂರ್ತಿ ಮುರುಘಾ ಶರಣರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ನಾಡು ಕಂಡ ಶ್ರೇಷ್ಠ ಕವಿ, ವಿಮರ್ಶಕ ಅನುವಾದಕ ಇತ್ಯಾದಿ ಅನೇಕ ಬಾರಿ ನಮ್ಮೊಡನೆ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದ ಅವರು ನವ್ಯ ದಲಿತ ಬಂಡಾಯ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸುತ್ತಿದ್ದರು. 2014 ರಲ್ಲಿ ಮುರುಘಾಮಠದ ಶಾಖಾ ಮಠವಾದ ನೆಲಮಂಗಲದ ವನಕಲ್ಲು ಸುಕ್ಷೇತ್ರ ಮಠದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ “ವನಕಲ್ಲು ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ನಮ್ಮದೇ ಮತ್ತೊಂದು ಶಾಖಾ ಮಠವಾದ ಅಥಣಿ ಗಚ್ಚಿನ ಮಠದಲ್ಲಿ 2017 ರಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದ ಉದ್ಘಾಟನೆ ಮಾಡಿದ್ದರು. ಒಬ್ಬ ಶ್ರೇಷ್ಠ ಚಿಂತಕರನ್ನು ಕನ್ನಡ ನಾಡು ಕಳೆದುಕೊಂಡಿದೆ. ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬದವರಿಗೆ ಬಸವಾದಿ ಪ್ರಮಥರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next