Advertisement
ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ಹಾಕುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು 25 ಲಕ್ಷ ರೂ. ವರೆಗೆ ಬೆಟ್ಟಿಂಗ್ ಕಟ್ಟುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವರು ಒಂದಕ್ಕೆ ಎರಡರಷ್ಟು ಬೆಟ್ಟಿಂಗ್ ಕಟ್ಟುತ್ತಿದ್ದಾರೆ.
Related Articles
Advertisement
ಎಲ್ಲಿ ನೋಡಿದರಲ್ಲಿ ಸೋಲು-ಗೆಲುವಿನದ್ದೇ ಚರ್ಚೆಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಅಂದರೆ ಕಳೆದ ಒಂದು ತಿಂಗಳಿನಿಂದ ಚಿತ್ರದುರ್ಗ ಮೀಸಲು ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರದ ಭರಾಟೆ ಜೋರಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರೇ ಚಿತ್ರದುರ್ಗಕ್ಕೆ ಆಗಮಿಸಿ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು. ಈಗ ಚುನಾವಣೆ ಮುಗಿದು ನಾಲ್ಕು ದಿನಗಳಾದರೂ ಜನ ರಾಜಕೀಯ ಚರ್ಚೆ ಬಿಟ್ಟಿಲ್ಲ. ಹೋಟೆಲ್, ಲಾಡ್ಜ್, ಬಸ್ನಿಲ್ದಾಣ, ಹರಟೆ ಕಟ್ಟೆ ಸೇರಿದಂತೆ ಎಲ್ಲೆಡೆ ಚುನಾವಣೆ ವಿಶ್ಲೇಷಣೆಯೇ ಕಂಡು ಬರುತ್ತಿದೆ. ವಿಧಾನಸಭಾ ಚುನಾವಣೆಯ ಫಲಿತಾಂಶ, ಮತಗಳ ಅಂತರ (ಲೀಡ್), ಮೋದಿ ಅಲೆ, ಭೋವಿ ಗುರುಪೀಠದ ಸ್ವಾಮೀಜಿಯವರ ನಡೆ, ಲಂಬಾಣಿ, ಭೋವಿ ಸಮುದಾಯ ಸೇರಿದಂತೆ ಇತರೆ ಪರಿಶಿಷ್ಟ ಜಾತಿಯ ಮತದಾರರು ಯಾವ ಅಭ್ಯರ್ಥಿ ಕಡೆ ವಾಲಿದರು, ಕಾಂಗ್ರೆಸ್ನ ಮೈತ್ರಿ ಪಕ್ಷ ಜೆಡಿಎಸ್ ಚಿತ್ತ ಯಾರ ಕಡೆ ಇತ್ತು, ಯುವ ಸಮುದಾಯ ಮೋದಿ ಮೋಡಿಗೆ ಬಿತ್ತೋ ಇಲ್ಲವೋ ಎಂಬ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಪೆನ್ನು, ಪೇಪರ್ ಹಿಡಿದು ಬೂತ್ ಮಟ್ಟದಲ್ಲಿ ನಮಗೆಷ್ಟು ಮತ ಬಂದಿದೆ, ವಿರೋಧಿಗಳಿಗೆಷ್ಟು ಮತ ಬಿದ್ದಿದೆ ಎಂದು ಲೆಕ್ಕಾಚಾರ ಹಾಕ ತೊಡಗಿದ್ದಾರೆ. ಮತದಾನ ಪ್ರಮಾಣ ಹಾಗೂ ಬೂತ್ ಮಟ್ಟದಲ್ಲಿನ ಮಾಹಿತಿಯನ್ನು ನಾಯಕರು ಕಲೆ ಹಾಕುತ್ತಿದ್ದಾರೆ.