Advertisement

ಚಿತ್ರದುರ್ಗ ಕಲುಷಿತ ನೀರಿನ ಪ್ರಕರಣ; ವಿಷ ಬೆರೆತಿಲ್ಲ ಎಂದು SP ಸ್ಪಷ್ಟನೆ

10:29 PM Aug 03, 2023 | Team Udayavani |

ಚಿತ್ರದುರ್ಗ: ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟವರ ದೇಹ ಹಾಗೂ ನೀರಿನಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ.

Advertisement

ಗುರುವಾರ ರಾತ್ರಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಲಭ್ಯವಾಗಿದ್ದು, ನಗರಸಭೆಯಿಂದ ಪೂರೈಕೆ ಮಾಡಿದ ನೀರಿನಲ್ಲಿ ವಿಷ ಬೆರೆತಿಲ್ಲ ಎನ್ನುವುದು ಗೊತ್ತಾಗಿದೆ.

ಹಖೆಯ ವೈಷಮ್ಯದ ಕಾರಣಕ್ಕೆ ನೀರಿನಲ್ಲಿ ವಿಷ ಬೆರೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಈ‌ ಹಿನ್ನೆಲೆಯಲ್ಲಿ ವರದಿ ಕುತೂಹಲ‌ ಮೂಡಿಸಿತ್ತು.ಮಹಿಳೆಯ ಮೃತದೇಹ ಹಾಗೂ ನೀರಿನ ಮಾದರಿಗಳನ್ನು ದಾವಣಗೆರೆಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು.

ವಿಷ ಬೆರೆಸಿದ ಶಂಕೆ ವ್ಯಕ್ತವಾಗಿದ್ದರಿಂದ ಪೊಲೀಸರು ನೀರುಗಂಟಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಎಫ್ಎಸ್ಎಲ್ ವರದಿಯ ಆಧಾರದ ಮೇರೆಗೆ ತನಿಖೆ ಮುಂದುವರಿಸಲು ನಿರ್ಧರಿಸಲಾಗಿತ್ತು. ಓವರ್‌ ಹೆಡ್‌ ಟ್ಯಾಂಕ್‌, ಮೃತ ಮಹಿಳೆಯ ಮನೆಯ ನೀರು ಹಾಗೂ ಅವರ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿಲ್ಲ ಎಂಬುದು ಖಚಿತವಾಗಿದೆ ಎಂದು ಎಸ್ಪಿ ಪರಶುರಾಮ್ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next