Advertisement

ಅಲ್ಪಸಂಖ್ಯಾತ ಸಮುದಾಯ ಭಯೋತ್ಪಾದನೆಯಡಿ ಒಂದಾದರೆ ಇಡೀ ವಿಶ್ವಕ್ಕೆ ಮಾರಕ: ಎ.ನಾರಾಯಣ ಸ್ವಾಮಿ

09:13 PM Aug 20, 2021 | Team Udayavani |

ಭರಮಸಾಗರ (ಚಿತ್ರದುರ್ಗ): ಅಲ್ಪಸಂಖ್ಯಾತ ಸಮುದಾಯ ಭಯೋತ್ಪಾದನೆಯಡಿ ಒಂದಾದರೆ ಇಡೀ ವಿಶ್ವಕ್ಕೆ ಇಂಥಹ ಬೆಳವಣಿಗೆ ಮಾರಕವಾಗುತ್ತದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.

Advertisement

ಇಲ್ಲಿನ ಜಿಲ್ಲಾ ಪಂಚಾಯತ ಸದಸ್ಯ ಡಿ ವಿ.ಶರಣಪ್ಪ ನಿವಾಸದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮಾತನಾಡಿದರು.

ಇದನ್ನೂ ಓದಿ:ಷರತ್ತು ಉಲ್ಲಂಘನೆ; ಜೋಗದಲ್ಲಿ ಏಳು ಜನರ ವಿರುದ್ಧ ಪ್ರಕರಣ

ಅಫ್ಘಾನಿಸ್ತಾನದಲ್ಲಿನ ರಾಜಕೀಯ ಬಿಕ್ಕಟ್ಟು ಭಾರತದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಆದರೂ ಭಾರತ ಎಚ್ಚರಿಕೆಯಿಂದ ಇರಬೇಕು. ಇದು ಪ್ರಜಾಪ್ರಭುತ್ವದ ಮೇಲೆ ಆಗಿರುವ ದೊಡ್ಡ ದಾಳಿ. ಇಡೀ ವಿಶ್ವ ಎಚ್ಚರಿಕೆಯಿಂದ ಇರಬೇಕು. ಈ ಕುರಿತು ಭಾರತ ಏಕಾಏಕೀ ತಿರ್ಮಾನ ತೆಗೆದುಕೊಳ್ಳುವುದಿಲ್ಲ. ಶ್ರೀಲಂಕದ ಎಲ್ ಟಿಟಿಇ ಮೇಲೆ ಭಾರತ  ಕ್ರಮ ಕೈಗೊಂಡ ಪರಿಣಾಮ ನಮ್ಮ ದೇಶದ ಪ್ರಧಾನ ಮಂತ್ರಿಗಳನ್ನು ಕಳೆದುಕೊಳ್ಳಬೇಕಾಯಿತು. ಹೀಗಾಗಿ ಈ ಬಗ್ಗೆ ನಮ್ಮ ದೇಶದ ಪ್ರಧಾನ ಮಂತ್ರಿ ಮೋದಿಯವರು ಅಫ್ಘಾನಿಸ್ತಾನ್ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next