Advertisement

ಚೀಟ್‌ ಫ‌ಂಡ್‌ನ‌ಲ್ಲಿ 5 ಕೋಟಿ ರೂ ವಂಚಿಸಿದ್ದ ದಂಪತಿ ಆತ್ಮಹತ್ಯೆ 

02:09 PM Oct 17, 2017 | |

ಕೊರಟಗೆರೆ: ಚಿಟ್‌ಫ‌ಂಡ್‌ ಅವ್ಯವಹಾರ ನಡೆಸಿ ಜನರಿಗೆ ಸುಮಾರು 5 ಕೋಟಿ ರೂಪಾಯಿ ಪಂಗನಾಮ ಹಾಕಿದ್ದ ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.

Advertisement

ರವಿಕುಮಾರ್‌ (48) ಮತ್ತು ಪತ್ರಿ ಪ್ರಭಾ (42) ಆತ್ಮಹತ್ಯೆಗೆ ಶರಣಾದ ದಂಪತಿಗಳು. ಇಬ್ಬರೂ ಜನರಿಗೆ ಚಿಟ್‌ಫ‌ಂಡ್‌ ಹಣ ವಂಚಿಸಿ ಭವ್ಯವಾದ ಬಂಗಲೆ ಕಟ್ಟಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರು. ವಂಚನೆಗೊಳಗಾದ ಜನರು ಇವರ ವಿರುದ್ಧ ಸಿಡಿದೆದ್ದು ದೂರು ದಾಖಲಿಸಿದ್ದರು. ದೂರಿನನ್ವಯ ಪೊಲೀಸರು ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದರು. 

ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ವಿಷ ಸೇವಿಸಿ ಸಾವನ್ನಪ್ಪಿದ್ದರೆ,ಪತಿ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ. 

ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಯ ಮುಂದೆ ನೂರಾರು ಜನರು ಜಮಾವಣೆಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next