Advertisement

ಬ್ರಹ್ಮರಕೂಟ್ಲು ಹಿ.ಪ್ರಾ. ಶಾಲೆ: ಚಿಣ್ಣರ ಮನೆ ಉದ್ಘಾಟನೆ

03:10 AM Jul 03, 2017 | Team Udayavani |

ಬಂಟ್ವಾಳ: ಬ್ರಹ್ಮರಕೂಟ್ಲು ಹಿ.ಪ್ರಾ. ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಶೈಕ್ಷಣಿಕ ಸಮಗ್ರ ಅಭಿವೃದ್ದಿಯ ಕಡೆ ನಮ್ಮ ನಡೆ ಯೋಜನೆಯಂತೆ ಚಿಣ್ಣರ ಮನೆ, ಶಾಲಾ ಶೌಚಾಲಯ ಉದ್ಘಾಟನೆ , ಉಚಿತ ನೋಟ್‌ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ, ಶಾಲಾ ದತ್ತು ಸ್ವೀಕಾರ ಸಮಿತಿ ಗೌರವಾಧ್ಯಕ್ಷ ಬಿ. ರಮಾನಾಥ ರೈ ಉದ್ಘಾಟಿಸಿದರು. ಶೈಕ್ಷಣಿಕವಾಗಿ ಮುಂದೆ ಬರುವಂತೆ ಸರಕಾರವು ಅನೇಕ ಅಭಿವೃದ್ದಿ ಯೋಜನೆಗಳನ್ನು ಹಮ್ಮಿಕೊಂಡಿದೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ, ಸೈಕಲ್‌ ವಿತರಣೆ, ಮೊಟ್ಟೆ ವಿತರಣೆ, ಸಮವಸ್ತ್ರ ನೀಡುವುದು ಇವೇ ಮೊದಲಾದ ಆಕರ್ಷಣೆಗಳ ಮೂಲಕ ಮಕ್ಕಳನ್ನು ಶಾಲೆಯ ಕಡೆಗೆ ಸೆಳೆಯುವ ಕೆಲಸಗಳು ನಡೆಯುತ್ತಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next