Advertisement

ನೆಲ್ಲಿಕಾಯಿ ಮೇಲೆ ಚೀನ ಜೀರುಂಡೆ ಬಾಧೆ

02:11 AM Feb 06, 2021 | Team Udayavani |

ಗುವಾಹಟಿ: ಕೇವಲ ನಮ್ಮ ಯೋಧರಿಗಷ್ಟೇ ಅಲ್ಲ, ನಮ್ಮ ಗಿಡ ಮರಗಳ ಮೇಲೂ ಚೀನ ಕಾಟ ಶುರುವಾಗಿದೆ! ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್‌ ಜಿಲ್ಲೆಯಲ್ಲಿ ಲಿಚಿ ಮರಗಳು, ನೆಲ್ಲಿಕಾಯಿ ಮರಗಳ ಮೇಲೆ ಚೀನ ಜೀರುಂಡೆಗಳ ಬಾಧೆ ಶುರುವಾಗಿದೆ. ಈ ಬಗ್ಗೆ ಇಂಡಿಯನ್‌ ಜರ್ನಲ್‌ ಆಫ್ ಎಂಟೋಮಾಲಜಿಯಲ್ಲಿ ವರದಿ ಪ್ರಕಟವಾಗಿದೆ.

Advertisement

ಅರುಣಾಚಲ ಪ್ರದೇಶದ ವಿವಿಧ ಭಾಗಗಳಲ್ಲಿ ಚೀನ ಜೀರುಂಡೆಯ ಹಾವಳಿಯನ್ನು ಅಧ್ಯಯನ ನಡೆಸಲಾಗಿದ್ದು, ನೆಲ್ಲಿಕಾಯಿ ಮರಗಳ ತೊಗಟೆಯನ್ನು ತಿಂದಿರುವುದು ಗೊತ್ತಾಗಿದೆ ಎಂದು ಈ ಅಧ್ಯಯನ ತಿಳಿಸಿದೆ.

ಈ ಜೀರುಂಡೆಗಳು ನೆಲ್ಲಿಕಾಯಿ ಮರಗಳ ತೊಗಟೆಯನ್ನು ತಿನ್ನುವುದರಿಂದ ಹಾಳಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಅರುಣಾಚಲ ಪ್ರದೇಶದ ಹೊರಗಿನ ರಾಜ್ಯಗಳ ಮೇಲೂ ಈ ಜೀರುಂಡೆಗಳು ದಾಳಿ ನಡೆಸಬಹುದು. ಅಂದರೆ ಬಿಹಾರ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನ‌ಲ್ಲೂ ಕಾಣಿಸಿಕೊಳ್ಳಬಹುದು ಎಂದು ಅಧ್ಯಯನ ನಡೆಸಿರುವ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next