Advertisement

ಚಿಂಚೋಳಿ: 99,767 ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರಿ ಬಿತ್ತನೆ

03:47 PM May 22, 2020 | Naveen |

ಚಿಂಚೋಳಿ: 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 99,767 ಹೆಕ್ಟೇರ್‌ ಪ್ರದೇಶ ಬಿತ್ತನೆ ಗುರಿ ಇದೆ ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಅನಿಲಕುಮಾರ ರಾಠೊಡ ತಿಳಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ವರ್ಷ ಮುಂಗಾರು ಮಳೆಗಳು ಉತ್ತಮವಾಗಿವೆ ಎಂದು ಈಗಾಗಲೇ ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಬೇಗನೆ ಬಿತ್ತನೆ ಕಾರ್ಯ ಪ್ರಾರಂಭ ಆಗುವ ಸಾಧ್ಯತೆ ಇದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ, ಕೀಟ ನಾಶಕಗಳನ್ನು ಸಂಗ್ರಣೆ ಮಾಡಿಕೊಳ್ಳಲಾಗಿದೆ. ಬಿತ್ತನೆ ಬೀಜಗಳ ಮತ್ತು ರಸಗೊಬ್ಬರ ಕೊರತೆ ಇಲ್ಲ ಎಂದರು.

ಬಿತ್ತನೆ ಕ್ಷೇತ್ರದ ವಿವರ: ಹೆಸರು 12,000 ಹೇಕ್ಟರ್‌, ಉದ್ದು 7,000 ಹೆಕ್ಟೇರ್‌, ತೊಗರಿ 69,500 ಹೇಕ್ಟರ್‌, ಅವರೆ 25 ಹೆಕ್ಟೇರ್‌, ಸೋಯಾಬಿನ 700 ಹೆಕ್ಟೇರ್‌, ಹೈಬ್ರಿಡ್‌ ಜೋಳ 310 ಹೆಕ್ಟೇರ್‌, ಸಜ್ಜೆ 1,000 ಹೆಕ್ಟೇರ್‌, ಮೆಕ್ಕೆಜೋಳ 200 ಹೆಕ್ಟೇರ್‌, ಎಳ್ಳು 650 ಹೆಕ್ಟೇರ್‌, ಹೈಬ್ರಿಡ್‌ ಹತ್ತಿ 150 ಹೆಕ್ಟೇರ್‌, ಕಬ್ಬು 1,487 ಹೆಕ್ಟೇರ್‌ ಹಾಗೂ ಇತರೆ 15 ಹೆಕ್ಟೇರ್‌ ಬಿತ್ತನೆ ಗುರಿ ಇದೆ. ದ್ವಿದಳ ಧಾನ್ಯ 22,222 ಹೆಕ್ಟೇರ್‌, ಎಣ್ಣಿಕಾಳು ಬೆಳೆ 1926.25 ಹೆಕ್ಟೇರ್‌ ಏಕದಳ ಧಾನ್ಯ 383.75 ಹೆಕ್ಟೇರ್‌, ವಾಣಿಜ್ಯ ಬೆಳೆ 409.28 ಹೆಕ್ಟೇರ್‌ ಬಿತ್ತನೆ ಆಗಲಿದೆ. ತೊಗರಿ 155 ಕ್ವಿಂಟಲ್‌, ಸೋಯಾಬಿನ್‌ 99.60 ಕ್ವಿಂಟಲ್‌ ಬೀಜ ಪೂರೈಕೆ ಆಗಿದೆ. ರಸಗೊಬ್ಬರ: ಯೂರಿಯಾ 10 ಟನ್‌, ಡಿಎಪಿ 2220 ಟನ್‌, ಎಂಒಪಿ 30 ಟನ್‌, ಕಾಂಪೋಸ್ಟ್‌ 50 ಟನ್‌ ಸೇರಿದಂತೆ 2,315 ಮೆಟ್ರಿಕ್‌ ಟನ್‌ ಸಂಗ್ರಹವಿದೆಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next