Advertisement

Chincholi; ಬಿಜೆಪಿ ಶಾಸಕ ಮತ್ತು ಕಾಂಗ್ರೆಸ್ ‌ಮುಖಂಡನ ಮಾತಿನ‌ ಚಕಮಕಿ

10:19 PM Jul 01, 2023 | Team Udayavani |

ಚಿಂಚೋಳಿ: ಆದರ್ಶ ವಿದ್ಯಾಲಯದಲ್ಲಿ ನಡೆದ ವನಮಹೋತ್ಸವ‌ ಕಾರ್ಯಕ್ರಮದಲ್ಲಿ ಶಾಸಕ ಡಾ.ಅವಿನಾಶ್ ಜಾಧವ‌ ಮತ್ತು ಕಾಂಗ್ರೆಸ್ ‌ಮುಖಂಡ ಲಕ್ಷ್ಮಣ ಆವಂಟಿ‌ ಮಾತಿನ‌ ಚಕಮಕಿ ನಡೆಯಿತು.
ಆದರ್ಶವಿದ್ಯಾಲಯ ಎಸ.ಡಿ.ಎಮ.ಸಿ ಅಧ್ಯಕ್ಷ ಲಕ್ಷ್ಮಣ ಆವಂಟಿ ಅರಣ್ಯ ಇಲಾಖೆ ವತಿಯಿಂದ ‌ನಡೆದ‌ವನ‌ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರೋಟೊಕಾಲ್ ಪ್ರಕಾರ ಶಾಲೆ ಅಧ್ಯಕ್ಷ ಅಧ್ಯತೆಯಲ್ಲಿ ಸಸಿ ನೆಡುವುದನ್ನು‌ ಬಿಜೆಪಿಯ ‌ಕಾರ್ಯಕರ್ತರನ್ನು‌ ಅಹ್ವಾನ ‌ಮಾಡಲಾಗಿದೆ ಎಂದು ‌ಅರಣ್ಯ‌ಇಲಾಖೆ ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡು ಇದರ ಬಗ್ಗೆ ಜಿಲ್ಲಾ ‌ಉಸ್ತವಾರಿ ಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಮಾತಿನ ಚಕಮಕಿ ‌ನಡೆಯಿತು.

Advertisement

ಶಾಸಕ ಡಾ.ಅವಿನಾಶ್ ಜಾಧವ್ ಮಾತನಾಡಿ ನಾನೇ ಚಿಂಚೋಳಿ ಸಿಎಂ ,ನಾನೇ‌ಮಂತ್ರಿ ಎಂದು ಗುಡುಗಿದರು. ಇನ್ನೂ ‌ಮುಂದೆ ಶಿಷ್ಟಾಚಾರ ಅನುಸರಿಸಿರಿ ಎಂದು ಅರಣ್ಯ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿ ಅಲ್ಲಿಂದ ತೆರಳಿದರು. ಮಾತಿನ ಚಕಮಕಿ ಸಂದರ್ಭದಲ್ಲಿ ಬಿಜೆಪಿ. ಕಾಂಗ್ರೆಸ್ ‌ಕಾರ್ಯಕರ್ತರ ಮಧ್ಯೆ ಕೂಗಾಟ ಚೀರಾಟ ನಡೆಯಿತು. ಇದರಿಂದಾಗಿ ‌‌ವನಮಹೋತ್ಸವ‌ ಕಾರ್ಯಕ್ರಮದಲ್ಲಿ ಗದ್ದಲ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next