Advertisement

ಭಾರತ ಮನವೊಲಿಸಲು ಚೀನ ಯತ್ನ

09:22 AM Nov 06, 2019 | Team Udayavani |

ಬೀಜಿಂಗ್‌: ಬ್ಯಾಂಕಾಕ್‌ನಲ್ಲಿ ನಡೆದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದ (ಆರ್‌ಸಿಇಪಿ) ಪೂರ್ವಸಿದ್ಧತಾ ಸಭೆಯಲ್ಲಿ ಒಪ್ಪಂದದಲ್ಲಿರುವ ಕೆಲವು ಅಂಶಗಳ ಬಗ್ಗೆ ಭಾರತ ಎತ್ತಿರುವ ಆಕ್ಷೇಪಗಳನ್ನು ಚರ್ಚೆಯ ಮೂಲಕ ಬಗೆಹರಿಸಲು ಪ್ರಯತ್ನಿಸಲಾಗುತ್ತದೆ ಎಂದು ಚೀನ ಹೇಳಿದೆ.

Advertisement

‘ಪರಸ್ಪರ ತಿಳಿವಳಿಕೆ ಹಾಗೂ ಅನುಸಂಧಾನ ಪ್ರಕ್ರಿಯೆಗಳ ಮೂಲಕ ಭಾರತ ಹೊಂದಿರುವ ಆತಂಕಗಳನ್ನು ದೂರಾಗಿಸಲು ನಿರ್ಧರಿಸಲಾಗಿದೆ. ಆರ್‌ಸಿಇಪಿಗೆ ಭಾರತ ಆದಷ್ಟು ಬೇಗನೇ ಸೇರಿದರೆ ಅದನ್ನು ಸ್ವಾಗತಿಸುತ್ತೇವೆ” ಎಂದು ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್‌ ಶುವಾಂಗ್‌ ತಿಳಿಸಿದ್ದಾರೆ. ಇದೇ ವೇಳೆ, ‘ಆರ್‌ಸಿಇಪಿಯು ಒಂದು ಪ್ರಾದೇಶಿಕ ಮಟ್ಟದ ವ್ಯಾಪಾರ ಒಪ್ಪಂದವಾಗಿದ್ದು, ಅದರಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಸಮಾನ ಲಾಭವಿರುತ್ತದೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next