Advertisement
ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ 2020-21ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಚಳ್ಳಕೆರೆ ನಗರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಕುರಿತು ನಾಗರಿಕರು ಉತ್ತಮವಾದ ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ವಿಶೇಷವಾಗಿ ಮರಣ ಸಂದರ್ಭದಲ್ಲಿ ನೆರವಾಗಲು ಆ್ಯಂಬುಲೆನ್ಸ್ ವ್ಯವಸ್ಥೆ, ಕೊಳಚೆ ಪ್ರದೇಶಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ, ಆಸ್ಪತ್ರೆ ಸೌಲಭ್ಯ, ಪಾವಗಡ ರಸ್ತೆಯಲ್ಲಿನ ನಗರಸಭೆ ಕಟ್ಟಡದಲ್ಲಿರುವ ಹೊಯ್ಸಳ ಸೌಹಾರ್ದ ಬ್ಯಾಂಕ್ ಅನ್ನು ಮತ್ತೆ ನಗರಸಭೆಗೆ ವಹಿಸಿಕೊಳ್ಳುವ ಕುರಿತು, ಇಂದಿರಾ ಶಾಪಿಂಗ್ ಕಾಂಪ್ಲೆಕ್ಸ್ ನೆಲಸಮಗೊಳಿಸಿ ಅತ್ಯಾಧುನಿಕ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ, ಬಳ್ಳಾರಿ ರಸ್ತೆ ಅಗಲೀಕರಣ ಸಂಬಂಧ ಸಾರ್ವಜನಿಕರು ನೀಡಿರುವ ಸಲಹೆಗಳನ್ನು ಅನುಷ್ಠಾನಗೊಳಿಸಲು ನಗರಸಭೆ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದರು.
Related Articles
Advertisement
ನಗರಸಭೆ ಮಾಜಿ ಸದಸ್ಯ ಎಂ.ಚೇತನ್ಕುಮಾರ್ ಮಾತನಾಡಿ, ನಗರಸಭೆ ವ್ಯಾಪ್ತಿಯ ನೂತನ ಬಡಾವಣೆಗಳಲ್ಲಿ ಹಲವಾರು ಲೋಪ ದೋಷಗಳಿವೆ. ನಗರಸಭೆ ನಿಯಮಗಳನ್ನು ಖಾಸಗಿ ಲೇಔಟ್ನವರು ಪಾಲಿಸುತ್ತಿಲ್ಲವೆಂದು ಆರೋಪಿಸಿದರು. ಸದಸ್ಯ ವೈ. ಪ್ರಕಾಶ್, ಕೆ. ವೀರಭದ್ರಪ್ಪ, ಶಿವಕುಮಾರ್, ಸಿ. ಶ್ರೀನಿವಾಸ್, ಹೊಯ್ಸಳ ಗೋವಿಂದ ಮಾತನಾಡಿದರು. ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಡಿ.ಕೆ. ಸೋಮಶೇಖರ್, ಎಸ್. ಮುಜೀಬ್, ನೇತಾಜಿ ಪ್ರಸನ್ನ ಮಾತನಾಡಿದರು.
ಪೂರ್ವಭಾವಿ ಸಭೆಯಲ್ಲಿ ನಗರಸಭಾ ಸದಸ್ಯರಾದ ಸುಮಾ ಭರಮಣ್ಣ, ಸುಜಾತಾ ಪಾಲಯ್ಯ, ಸಾವಿತ್ರಮ್ಮ, ಸಾಕಮ್ಮ, ಆರ್. ಮಂಜುಳಾ, ಜೈತುಂಬಿ, ಸುಮಾ ಆಂಜನೇಯ, ಮುಖಂಡರಾದ ಭರಮಣ್ಣ, ಪಾಲಯ್ಯ, ಆರ್. ಜಗದೀಶ್ ನಗರಸಭೆ ಅಧಿಕಾರಿಗಳು ಭಾಗವಹಿಸಿದ್ದರು.