Advertisement

ಮಕ್ಕಳಿಗೆ ದಾರಿದೀಪ

11:21 AM Dec 04, 2018 | Team Udayavani |

ಕನ್ನಡದಲ್ಲಿ ಈಗಾಗಲೇ ಹಲವು ಮಕ್ಕಳ ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ “ದಾರಿದೀಪ’ ಚಿತ್ರ ಹೊಸ ಸೇರ್ಪಡೆ. ತುಪ್ಪದಕೊಳದ ಡಿ.ಸಿ.ಮೋಹನ್‌ ಮತ್ತು ಪ್ರಕಾಶ್‌ ನಿರ್ಮಾಣದ “ದಾರಿದೀಪ’ ಚಿತ್ರಕ್ಕೆ ಇತ್ತೀಚೆಗೆ ಹೊಳಲ್ಕೆರೆಯ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಯತಿರಾಜ್‌ ಆರಂಭ ಫ‌ಲಕ ತೋರಿ, ಚಿತ್ರತಂಡಕ್ಕೆ ಶುಭಾಶಯ ಕೋರಿದರು.

Advertisement

ನಿರ್ಮಾಪಕರಾದ ಡಿ.ಸಿ.ಮೋಹನ್‌, ಪ್ರಕಾಶ್‌ ತುಪ್ಪದಕೊಳ್ಳ ಕ್ಯಾಮೆರಾಗೆ ಚಾಲನೆ ನೀಡಿದರು. ಹೇಮಂತ್‌ ನಾಯ್ಕ ಈ ಚಿತ್ರದ ನಿರ್ದೇಶಕರು. “ದಾರಿದೀಪ’ ಚಿತ್ರಕ್ಕೆ “ಕತ್ತಲಿನಿಂದ ಬೆಳಕಿನೆಡೆಗೆ’ ಎಂಬ ಅಡಿಬರಹವಿದೆ. ನಿರ್ದೇಶಕ ಹೇಮಂತ್‌ನಾಯ್ಕ ಅವರು ಈ ಹಿಂದೆ “ಗರಸ್ಯಾ’, “ಧರ್ಮಪುರ’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹೊಳಲ್ಕೆರೆ, ಚಿತ್ರದುರ್ಗ, ದಾವಣಗೆರೆ ಮುಂತಾದ ಕಡೆ 25ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next