Advertisement

Goa ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸಿ ಅಭಿಯಾನ

09:55 PM Apr 16, 2023 | Team Udayavani |

ಪಣಜಿ: ಗೋವಾದಲ್ಲಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯುಂಟಾಗುತ್ತಿದೆ. ಇದರಿಂದಾಗಿ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಕರೆತರುವ ಉದ್ದೇಶದಿಂದ “ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸಿ” ಅಭಿಯಾನವನ್ನು ಆರಂಭಿಸಲಾಗಿದೆ. ಕನ್ನಡಿಗರ ಮನೆ ಮನೆಗೆ ಭೇಟಿ ನೀಡಿ ಮಕ್ಕಳನ್ನು ಕನ್ನಡ ಶಾಲೆಗೇ ಕಳುಹಿಸಲು ಮನವಿ ಮಾಡಲಾಗುತ್ತಿದೆ ಎಂದು ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ ಮಾಹಿತಿ ನೀಡಿದರು.

Advertisement

ಈ ಅಭಿಯಾನದಲ್ಲಿ ಸುಮಾರು 25 ಜನ ವಿವಿಧ ಕನ್ನಡ ಶಾಲಾ ಶಿಕ್ಷಕರು ಹಾಗೂ ಕನ್ನಡ ಸಂಘದ ಪದಾಧಿಕಾರಿಗಳು ಪಾಲ್ಗೊಂಡು ಕನ್ನಡಿಗರ ಮನೆ ಮನೆಗೆ ತೆರಳಿ ಜುವಾರಿನಗರ ಕನ್ನಡ ಸಂಘದ ನೇತೃತ್ವದಲ್ಲಿ ಕನ್ನಡ ಶಾಲೆ ಉಳಿಸಿ ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜುವಾರಿಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ, ಕನ್ನಡ ಶಾಲೆಯ ಅತಿಥಿ ಶಿಕ್ಷಕ ಯಲ್ಲಾಲಿಂಗೇಶ ತಾಳಿಕೋಟಿ, ಬೈನಾ ಕಾಳಿದಾಸ ಶಿಕ್ಷಣ ಸಂಸ್ಥೆ ಮುಖ್ಯ ಶಿಕ್ಷಕ ಬಿ.ವಿ.ಪಾಟೀಲ್, ಶಿಕ್ಷಕರಾದ ಸುಧೀರ ಬೆಂಡೆ, ವಿಟಿ ಅರೆಬೆಂಚಿ, ಜುವಾರಿಗರ ಕನ್ನಡ ಸಂಘದ ಕಾರ್ಯದರ್ಶಿ ನದಾಫ್, ಶ್ರೀಕಾಂತ ಮರಿಗೌಡರ್, ಚಂದ್ರಶೇಖರ ಬಿಂಗಿ, ಕನ್ನಡ ಸಂಘದ ಸಹಕಾರ್ಯದರ್ಶಿ ಬಾಬುಗೌಡ ಮ್ಯಾಗೇರಿ, ರಾಘವೇಂದ್ರ ಅಂಬಿಗೇರ, ಶಿಕ್ಷಕರು ಮಲ್ಲಿಕಾರ್ಜುರ ನರಹಟ್ಟಿ, ಶಿಕ್ಷಕರಾದ ಹನುಮಂತ ಕಡ್ಲಿಮಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next