Advertisement
– ಇದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರ ಪ್ರಶ್ನೆ.
Related Articles
ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಪ್ರಸ್ತಾವನೆಯಲ್ಲಿ ಸರಕಾರಿ ಶಾಲೆಗಳನ್ನು ಬಲಪಡಿಸಬೇಕಾದ ಅಗತ್ಯವಿದೆ. ಸರಕಾರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಬದಲು ಒಂದನೆಯ ತರಗತಿಯಿಂದ ಇಂಗ್ಲಿಷ್ ಕಲಿಯಲು ನೆರವಾಗುವಂತೆ ಶಿಕ್ಷಕರ ನೇಮಕ ಮಾಡಬೇಕು. ಡಾ| ಅನಂತಮೂರ್ತಿಯವರು ಹೇಳುವಂತೆ ಕನ್ನಡವನ್ನೂ ಇಂಗ್ಲಿಷನ್ನೂ ಕಲಿಸಬೇಕು ಎಂದು ಪ್ರತಿಪಾದಿಸಿದರು.
Advertisement
ಖಾಸಗಿ ಶಾಲೆಗಳಲ್ಲಿ ಸಿರಿವಂತರು, ರಾಜಕಾರಣಿಗಳ ಪಾಲು!48,000 ಸರಕಾರಿ ಶಾಲೆಗಳಿವೆ, ಒಂದು ಕೋಟಿ ಮಕ್ಕಳು ಓದುತ್ತಿದ್ದಾರೆ, 2.5 ಲಕ್ಷ ಶಿಕ್ಷಕರು, 1.5 ಲಕ್ಷ ಬಿಸಿಯೂಟ ಸಿಬಂದಿ ಇದ್ದಾರೆ. 2.3 ಲ.ಕೋ.ರೂ. ಅನುದಾನದಲ್ಲಿ ಶೇ.18-19 ಶಿಕ್ಷಣಕ್ಕೆ ಮೀಸಲು ಇರುತ್ತದೆ. ಇಷ್ಟಾಗಿಯೂ 15,000 ಶಾಲೆಗಳಿಗೆ ಶೌಚಾಲಯಗಳಿಲ್ಲ. ಇದರಿಂದಾಗಿ ಖಾಸಗಿ ಶಾಲೆಗಳತ್ತ ಮಕ್ಕಳು ಹೋಗುತ್ತಿದ್ದಾರೆ. ಅರ್ಧಾಂಶ ಖಾಸಗಿ ಶಾಲೆಗಳು ಹಣ ಉಳ್ಳವರದ್ದೂ, ಅರ್ಧಾಂಶ ಶಾಲೆಗಳು ರಾಜಕಾರಣಿಗಳದ್ದೂ ಇದೆ. ಹೀಗಿರುವಾಗ ನಾವು ಯಾವ ನಿಲುವು ತಳೆಯಬಹುದು? ಸಾಮಾಜಿಕ ನ್ಯಾಯದ ಪ್ರಕಾರ ನಿರ್ಣಯ ತಳೆಯಬೇಕು. ಎಲ್ಲರಿಗೂ ಒಂದೇ ರೀತಿಯ ಏಕರೂಪೀ ಶಿಕ್ಷಣವನ್ನು ಜಾರಿಗೆ ತರಲು ಒತ್ತಾಯಿಸಬಹುದು. ಹೀಗೆ ನಿರ್ಣಯಿಸಿದ್ದೇ ಆದರೆ ಗುರಿ ಮುಟ್ಟಲು ಸಾಧ್ಯವೆ ಎಂದು ಪ್ರಶ್ನಿಸಿಕೊಂಡ ಕೋಟ ಶ್ರೀನಿವಾಸ ಪೂಜಾರಿಯವರು ಇಂತಹ ವಿಷಯಗಳ ಬಗ್ಗೆ ಸಾಹಿತ್ಯ ಸಮ್ಮೇಳನಗಳಲ್ಲಿ ಚರ್ಚೆ ನಡೆಯುವಂತಾಗಲಿ ಎಂದು ಹಾರೈಸಿದರು.