Advertisement

Modi ಮತ್ತೆ ಪ್ರಧಾನಿಯಾಗಲು ಗೆಲ್ಲಿಸಿ: ಕೋಟ ಶ್ರೀನಿವಾಸ ಪೂಜಾರಿ

10:38 PM Apr 05, 2024 | Team Udayavani |

ಕಾರ್ಕಳ: ಪಕ್ಷದ ಕಾರ್ಯಕರ್ತರು ಮತ ಕೇಳುವಾಗ ಪ್ರಜಾಪ್ರಭುತ್ವದ ದೇಗುಲವೆನಿಸಿದ ಸಂಸತ್‌ನೊಳಗೆ ಪಾಕಿಸ್ಥಾನಕ್ಕೆ ಜೈ ಎನ್ನುವವರಿಗೆ ಸಹಾನುಭೂತಿ ತೋರಿಸಿದವರು ಬೇಕೋ ಅಥವಾ ಭಾರತ್‌ ಮಾತಾಕೀ ಜೈ ಎನ್ನುವವರು ಬೇಕೋ ಎನ್ನುವುದನ್ನು ಸ್ಪಷ್ಟವಾಗಿ ತಿಳಿಹೇಳಬೇಕು. ಮೋದಿಯೇ ಮತ್ತೆ ಪ್ರಧಾನಿಯಾಗಬೇಕು ಎಂದು ಕೈ ಮೇಲೆತ್ತುವ ಸಲುವಾಗಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿ ತನ್ನನ್ನು ಆರಿಸಿಕೊಡುವಂತೆ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು.

Advertisement

ಇಲ್ಲಿನ ಮಂಜುನಾಥ ಪೈ ಸಭಾಂಗಣದಲ್ಲಿ ಎ. 5ರಂದು ನಡೆದ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಬೂತ್‌ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಶಾಸಕನಾಗಿ, ಸಚಿವನಾಗಿ ಶ್ರೀನಿವಾಸ ಪೂಜಾರಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸುವವರು ಪಂ. ಸದಸ್ಯರಿಗೆ ಗೌರವ ಧನ, ಹಿಂದುಳಿದ ವರ್ಗಗಳ ಹಾಸ್ಟೆಲ್‌ ವ್ಯವಸ್ಥೆ, ಮುಜರಾಯಿ ಖಾತೆ ಸಚಿವನಾಗಿದ್ದಾಗ 1500 ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ಸಹಿತ ಹತ್ತಾರು ಯೋಜನೆಗಳನ್ನು ತಂದಿದ್ದನ್ನು ತನಿಖೆ ನಡೆಸಿ, ಖಚಿತ ಪಡಿಸಿಕೊಳ್ಳಲಿ ಎಂದರು.

ಅಯೋಧ್ಯೆ ಹಿರಿಯ ಕರಸೇವಕರಾದ ವಿಜಯೇಂದ್ರ ಕಿಣಿ, ಸುಂದರ ಬಿ. ಅವರು ಉದ್ಘಾಟಿಸಿದರು. ಹಿರಿಯರಾದ ಬೋಳ ಪ್ರಭಾಕರ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಗುರ್ಮೆ ಸುರೇಶ್‌ ಶೆಟ್ಟಿ, ಯಶಪಾಲ್‌ ಸುವರ್ಣ, ಹಿರಿಯರಾದ ಎಂ. ಕೆ. ವಿಜಯಕುಮಾರ್‌, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್‌ ಕುಂದಾಪುರ, ಮಹೇಶ್‌ ಶೆಟ್ಟಿ ಕುಡುಪುಲಾಜೆ ಮಾತನಾಡಿದರು. ರಾಘವೇಂದ್ರ ಕಿಣಿ, ನವೀನ್‌ ಶೆಟ್ಟಿ ಕುತ್ಯಾರು, ಮಹಾವೀರ ಹೆಗ್ಡೆ, ಜಯರಾಮ್‌ ಸಾಲ್ಯಾನ್‌, ರೇಷ್ಮಾ ಉದಯ್‌ ಶೆಟ್ಟಿ, ಉದಯ ಎಸ್‌.ಕೋಟ್ಯಾನ್‌, ಸತೀಶ್‌ ಶೆಟ್ಟಿ ಮುಟ್ಲುಪ್ಪಾಡಿ, ವಿಖ್ಯಾತ್‌ ಶೆಟ್ಟಿ, ಮಣಿರಾಜ್‌ ಶೆಟ್ಟಿ, ಶ್ಯಾಮಲಾ ಕುಂದರ್‌, ಕೆ.ಪಿ ಶೆಣೈ, ,ಸುದೇಶ್‌, ದಿನಕರ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರಾಧ್ಯಕ್ಷ ನವೀನ್‌ನಾಯಕ್‌ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರವೀಣ್‌ ಸಾಲ್ಯಾನ್‌ ವಂದಿಸಿದರು. ನರಸಿಂಹ ಕಾಮತ್‌ ನಿರೂಪಿಸಿದರು.

ದಿವಾಳಿಯತ್ತ‌ 2ನೇ ರಾಜ್ಯವಾಗಿ ಕರ್ನಾಟಕ
ರಾಜ್ಯ ಬಿಜೆಪಿ ಪ್ರ. ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ ಮಾತನಾಡಿ, ಆರ್ಥಿಕತೆಯಲ್ಲಿ ದಿವಾಳಿಯಾದ ಮೊದಲ ದೇಶ ಶ್ರೀಲಂಕಾ. ದೇಶದಲ್ಲಿ ಕೇರಳ ರಾಜ್ಯ ದಿವಾಳಿತನ ಕಡೆ ಸಾಗುವ ಮೊದಲ ರಾಜ್ಯವಾದರೆ, ಎರಡನೇ ರಾಜ್ಯವಾಗುವತ್ತ ಕರ್ನಾಟಕ ಸಾಗುತ್ತಿದೆ ಎಂದರು. ಕೇಂದ್ರದ ಕಿಸಾನ್‌ ಸಮ್ಮಾನ್‌ಯೋಜನೆಯಲ್ಲಿ ಕೇಂದ್ರ 6 ಸಾವಿರ ರೂ. ರಾಜ್ಯ 4 ಸಾವಿರ ರೂ. ನೀಡುತಿತ್ತು. ಇದೀಗ ರಾಜ್ಯ ತನ್ನ ಪಾಲನ್ನು ನಿಲ್ಲಿಸಿದೆ. ಭಾಗ್ಯಲಕ್ಷ್ಮೀ ಯೋಜನೆ ಹಣ ಸರಿಯಾಗಿ ಪಾವತಿಯಾಗುತಿಲ್ಲ. ಹಾಸ್ಟೆಲ್‌ನಲ್ಲಿ ಸೀಟ್‌ ಸಿಗದ ಬಡ ಮಕ್ಕಳಿಗೆ ವಿದ್ಯಾಸಿರಿಯಲ್ಲಿ ನೀಡಲಾಗುತ್ತಿದ್ದ 1,500 ರೂ.ಗಳನ್ನು ನಿಲ್ಲಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಜನನ-ಮರಣ ಪ್ರಮಾಣ ಪತ್ರಕ್ಕೆ ಇದ್ದ 2 ರೂ. ಈಗ 100ಕ್ಕೇರಿದೆ. ನೋಂದಣಿ ಶುಲ್ಕ 5 ರೂ. ಇದ್ದದ್ದು 200 ರೂ. ಆಗಿದೆ. ದತ್ತು ಬೀಡ್‌ 500 ರೂ. ಇದ್ದದ್ದು 1 ಸಾವಿರ ರೂ. ಆಗಿದೆ. ಪ್ರಮಾಣ ಪತ್ರ ಪಡೆಯಲು 20 ರೂ. ಇದ್ದ ಶುಲ್ಕ 100 ರೂ. ಆಗಿದೆ. ಪವಾರ್‌ ಆಪ್‌ ಅಟಾರ್ನಿ 100 ರೂ. ಇದ್ದಿರುವುದು 500 ರೂ. ಆಗಿದೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಎಂದೂ ನಾವು ವಿರೋಧಿಸಲಿಲ್ಲ. ಇತರ ಯೋಜನೆ, ಸೌಕರ್ಯಗಳನ್ನು ನಿರ್ಲಕ್ಷಿಸಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next