Advertisement

ಬಾಲ್ಯದ ಕನಸು ನನಸಾಯ್ತು: ಶಶಾಂಕ್‌

03:21 AM Apr 16, 2019 | Team Udayavani |

ಕೋಟ: ಕೋಟದ ವಿವೇಕ ವಿದ್ಯಾಸಂಸ್ಥೆಯ ವಿಜ್ಞಾನ ವಿದ್ಯಾರ್ಥಿ, ಗ್ರಾಮಾಂತರ ಪ್ರತಿಭೆ ಶಶಾಂಕ್‌ ಆಚಾರ್‌ ವಿಜ್ಞಾನ ವಿಭಾಗದಲ್ಲಿ 591 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ಅಗ್ರ ಹತ್ತರೊಳಗೆ ಸ್ಥಾನ ಗಳಿಸಿದ್ದಾರೆ.

Advertisement

ಐಎಎಸ್‌ ಅಧಿಕಾರಿಯಾಗಿ ದೇಶ ಸೇವೆಗೈಯುವ ಮೂಲಕ ಜನಸಾಮಾನ್ಯರ ಕಷ್ಟಸುಖಗಳಿಗೆ ಸ್ಪಂದಿಸಬೇಕು ಎನ್ನುವುದು ಇವರ ಬಹುದೊಡ್ಡ ಕನಸು. ಅದು ಸಾಧ್ಯವಾಗದಿದ್ದಲ್ಲಿ ವೈದ್ಯನಾಗಿ ಜನಸೇವೆ ಮಾಡಬೇಕು ಎನ್ನುವ ಹಂಬಲವಿದೆ.

ತಂದೆ ಸದಾಶಿವ ಆಚಾರ್‌ ಸಹಕಾರಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಈಗ ತಾಯಿ ರಾಜೀವಿ ಆಚಾರ್‌ ಉದ್ಯೋಗವನ್ನು ಮುಂದುವರಿಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next