Advertisement

ಕೆರೆಯಲ್ಲಿ ಬಿದ್ದ ಮಗುವನ್ನು ರಕ್ಷಸಿ ನೀರುಪಾಲಾದ ತಂದೆ 

01:39 PM Apr 30, 2018 | Team Udayavani |

ಮಂಡ್ಯ: ಕೆರೆಯಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ತಂದೆ ಈಜು ಬಾರದ ಕಾರಣ ಕೆರೆಯಲ್ಲಿ ಮುಳುಗಿ ದಾರುಣ ವಾಗಿ ಸಾವನ್ನಪ್ಪಿದ ಘಟನೆ ನಾಗಮಂಗದ ಬೀರೆಶ್ವರ ಕೆರೆಯಲ್ಲಿ  ಸೋಮವಾರ ನಡೆದಿದೆ. 

Advertisement

ಮೃತ ದುರ್ದೈವಿ ಫಿರೋಜ್‌ ಎನ್ನುವವರಾಗಿದ್ದು, ಪತ್ನಿ ಜುಬಿನ್‌ ತಾಜ್‌ ಅವರು 1 ವರ್ಷದ ಮಗನನ್ನು ಕರೆದುಕೊಂಡು ಕೆರೆ ಬಳಿ ಬಟ್ಟೆ ತೊಳೆಯಲೆಂದು ತೆರಳಿದ್ದಾರೆ. ಈ ವೇಳೆ ಮಗು ಆಯತಪ್ಪಿ ಕೆರೆಗೆ ಬಿದ್ದಿದೆ. ರಕ್ಷಿಸಲು ತೆರಳಿದ ಫಿರೋಜ್‌ ದಾರುಣವಾಗಿ ಸಾವನ್ನಪ್ಪಿದ್ದಾರೆ. 

ಶವವನ್ನು ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬಂದಿಗಳು ಮೇಲಕ್ಕೆತ್ತಿದ್ದಾರೆ. ಅಸ್ವಸ್ಥಗೊಂಡಿರುವ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಗಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next