Advertisement

ಜಡ್ಜ್ ಎದುರೇ ತಾಳಿ ಕಟ್ಟಿದ! ವರ, ವಧು ಸೇರಿ ಪುರೋಹಿತರೂ ಅರೆಸ್ಟ್

01:20 PM Feb 02, 2017 | Sharanya Alva |

ಶಿವಮೊಗ್ಗ:ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ ಎಂದು ಸ್ವತಃ ನ್ಯಾಯಾಧೀಶರೇ ವರನಿಗೆ ಬುದ್ಧಿ ಹೇಳಿದರೂ, ಅದನ್ನು ಕೇಳದೆ ಆತುರದಲ್ಲಿಯೇ ವಧುವಿಗೆ ತಾಳಿ ಕಟ್ಟಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

Advertisement

ಬಾಲ್ಯ ವಿವಾಹವನ್ನು ನ್ಯಾಯಾಧೀಶರು ತಡೆಯಲು ಮುಂದಾದರು, ಯಾವುದೇ ಪ್ರಯೋಜನವಾಗಿಲ್ಲ. ಜಡ್ಜ್ ಅನ್ನು ನೋಡಿದ ವರ ಗಡಿಬಿಡಿಯಲ್ಲೇ ವಧುವಿಗೆ ತಾಳಿ ಕಟ್ಟಿಬಿಟ್ಟಿದ್ದ. 

ಶಿವಮೊಗ್ಗದ ಓಟಿ ರಸ್ತೆಯಲ್ಲಿರುವ ಸೀತಮ್ಮ ಅನಂತಯ್ಯ ಕಲ್ಯಾಣ ಮಂಟಪದಲ್ಲಿ ಈ ಘಟನೆ ಗುರುವಾರ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಇದೀಗ ಬಾಲ್ಯವಿವಾಹವಾದ ವರ, ವಧು ಹಾಗೂ ವಿವಾಹ ನಡೆಸಿಕೊಟ್ಟ ಪುರೋಹಿತರು ಜೈಲುಕಂಬಿ ಎಣಿಸುವಂತಾಗಿದೆ!

Advertisement

Udayavani is now on Telegram. Click here to join our channel and stay updated with the latest news.

Next