Advertisement

ಬೀದಿ ನಾಯಿಗಳ ದಾಳಿಗೆ ಬಾಲಕಿ ಬಲಿ

06:30 AM Sep 10, 2018 | Team Udayavani |

ಕುಣಿಗಲ್‌(ತುಮಕೂರು): ತಾಲೂಕಿನ ನಿಂಗಯ್ಯನಪಾಳ್ಯ ಗ್ರಾಮದ ದೊಡ್ಡಕೆರೆ ಅಂಗಳದಲ್ಲಿ ಭಾನುವಾರ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಆಕೆಯನ್ನು ಕಚ್ಚಿ ಕೊಂದು ಹಾಕಿವೆ. ಪಟ್ಟಣದ ಸಂತ ರೀತಮ್ಮನ
ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿರುವ ತೇಜಸ್ವಿನಿ (12) ನಾಯಿಗಳ ದಾಳಿಯಿಂದ ಮೃತಪಟ್ಟಿರುವ ಬಾಲಕಿ.

Advertisement

ಬೆಳಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ಆಕೆಯ ತಾಯಿ ಗಂಗಮ್ಮ, ಬಟ್ಟೆ ಒಗೆಯಲು ದೊಡ್ಡಕೆರೆಗೆ ಹೋಗಿದ್ದರು.
ತಾಯಿಯನ್ನು ಹುಡುಕಿಕೊಂಡು ತೇಜಸ್ವಿನಿ ಕೆರೆ ಬಳಿಗೆ ಬಂದಾಗ ಏಳೆಂಟು ನಾಯಿಗಳ ಗುಂಪೊಂದು ಹಠಾತ್ತನೆ ದಾಳಿ ನಡೆಸಿದ್ದು, ಕೈ-ಕಾಲು, ಮುಖ ಸೇರಿ ದೇಹದ ಹಲವುಭಾಗವನ್ನು ತಿಂದು ಕೊಂದು ಹಾಕಿದವು. ಬಹಳ ಹೊತ್ತಾದರೂ ಬಾರದಿದ್ದಾಗ, ತಂದೆ ಗಂಗಾಧರ್‌ ಮಗಳನ್ನು ಹುಡುಕಿಕೊಂಡು ಕೆರೆ ಅಂಗಳಕ್ಕೆ ಬಂದಾಗ ನಾಯಿಗಳ ಗುಂಪೊಂದು ಮಗಳ ದೇಹ ತಿನ್ನುತ್ತಿದ್ದ ದೃಶ್ಯ ಕಂಡು ಕಿರುಚಿಕೊಂಡರು. ನಾಯಿಗಳನ್ನು ಓಡಿಸುವಷ್ಟರಲ್ಲಿ ಮಗಳು ಅಸು ನೀಗಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next