Advertisement

Uppinangady:ಮಗು ಸಾವು: ಪತಿ ಮೇಲೆ ದೂರು ದಾಖಲು

12:57 AM Jul 04, 2023 | Team Udayavani |

ಉಪ್ಪಿನಂಗಡಿ: ಅನಾ ರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂಟು ತಿಂಗಳ ಮಗುವೊಂದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಹಸುಳೆಯ ತಾಯಿ ಮಗುವಿನ ಮರಣದ ಕುರಿತಾಗಿ ಪತಿಯ ಮೇಲೆ ಸಂಶಯ ವ್ಯಕ್ತಪಡಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

34ನೇ ನೆಕ್ಕಿಲಾಡಿ ಗ್ರಾಮದ ಸಾಂತ್ಯಡ್ಕ ನಿವಾಸಿ ಶ್ರೀಧರ ನಾಯ್ಕ ಮತ್ತು ಚಿತ್ರಾ ದಂಪತಿಯ ಎಂಟು ತಿಂಗಳ ಮಗು ಜೀವಿತ್‌ನನ್ನು ಜ್ವರದ ಕಾರಣಕ್ಕಾಗಿ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಮಗು ಜು. 1ರಂದು ಮೃತಪಟ್ಟಿತ್ತು. ಬಳಿಕ ಶ್ರೀಧರ ನಾಯ್ಕ ಪತ್ನಿ ಚಿತ್ರಾ ಅವರು ಜು. 2ರಂದು ಉಪ್ಪಿನಂಗಡಿ ಪೊಲೀಸರಿಗೆ ಮಗುವಿನ ಮರಣದ ಕುರಿತಾಗಿ ಪತಿಯ ಮೇಲೆ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದರು.

ದೂರಿನಲ್ಲಿ ಜ್ವರದಿಂದ ಬಳಲುತ್ತಿದ್ದ ಮಗುವಿನೊಂದಿಗೆ ತಾನು ತವರು ಮನೆಗೆ ಹೋಗುತ್ತೇನೆಂದಾಗ ತನಗೂ ತನ್ನ ಗಂಡನಿಗೂ ಜಗಳವಾಗಿ ತಳ್ಳಾಟದ ವೇಳೆ ಮಗುವಿನೊಂದಿಗೆ ತಾನು ಬಿದ್ದಿದ್ದೆ. ಬಳಿಕ ಮಗುವಿನ ಜ್ವರ ಬಿಗಡಾಯಿಸಲು ಗಂಡ ತನ್ನೊಂದಿಗೆ ಜಗಳವಾಡಿರುವುದೇ ಕಾರಣವಾಗಿದೆ ಎಂದು ದೂರಿದ್ದಾರೆ.

ವರದಿ ಬರಬೇಕಿದೆ
ಶ್ರೀಧರ ನಾಯ್ಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next