Advertisement

ಗ್ರಾಮಸ್ಥರೊಂದಿಗೆ ಜೊಲ್ಲೆ ಸಮಾಲೋಚನೆ

04:42 PM Apr 09, 2020 | Naveen |

ಚಿಕ್ಕೋಡಿ: ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕಲ್ಲೊಳ, ಯಡೂರ, ಚಂದೂರ ಹಾಗೂ ಇಂಗಳಿ ಗ್ರಾಮಗಳಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಭೇಟಿ ನೀಡಿ ಕೋವಿಡ್  ತಡೆಗಟ್ಟುವ ಕುರಿತು ಗ್ರಾಮಸ್ಥರು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿದರು. ಬಳಿಕ ಮಾತನಾಡಿದ ಅವರು, ಅಗತ್ಯ ವಸ್ತುಗಳನ್ನು ನಿಮ್ಮ-ನಿಮ್ಮ ಮನೆಗಳ ಸಮೀಪ ಗಾಡಿಗಳ ಮೂಲಕ ಪೂರೈಸುವ ವ್ಯವಸ್ಥೆ ಮಾಡಲಾಗುತ್ತದೆ.

Advertisement

ಆತಂಕಕ್ಕೊಳಗಾಗದೇ ಅನಗತ್ಯ ವಸ್ತುಗಳನ್ನು ಖರೀದಿಸುವುದು ಬೇಡ. ಅಗತ್ಯ ವಸ್ತುಗಳನ್ನು ಕೊಳ್ಳುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಆದಷ್ಟು ಮನೆಯಲ್ಲೇ ಇರಿ ಎಂದರು. ಈ ಸಂದರ್ಭದಲ್ಲಿ ಚಿಕ್ಕೋಡಿ ತಹಶೀಲ್ದಾರ್‌ ಸುಭಾಷ ಸಂಪಗಾವಿ, ಅಂಕಲಿ ಪಿಎಸ್‌ಐ ಎಂ.ಎಂ. ತಹಶೀಲ್ದಾರ, ಸಿಡಿಪಿಒ ದೀಪಾ ಕಾಳೆ, ತಾಪಂ ಇಒ ಕೆ.ಎಸ್‌. ಪಾಟೀಲ, ಅಜೀತ ದೇಸಾಯಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next