Advertisement

ಮೂರು ನೈರ್ಮಲೀಕರಣ ಘಟಕ ಸ್ಥಾಪನೆ

12:37 PM Apr 11, 2020 | Naveen |

ಚಿಕ್ಕೋಡಿ: ನಗರದ ಮೂರು ಕಡೆಗಳಲ್ಲಿ ಕೊರೊನಾ ಹರಡುವಿಕೆ ತಡೆಗಟ್ಟುವ ನೈರ್ಮಲೀಕರಣ ಘಟಕಗಳು ಸ್ಥಾಪನೆಯಾಗಿದ್ದು, ಪೊಲೀಸ್‌, ಪೌರ ಕಾರ್ಮಿಕರು ಹಾಗೂ ವೈದ್ಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಹೇಳಿದರು.

Advertisement

ನಗರದಲ್ಲಿ ಜೊಲ್ಲೆ ಉದ್ಯೋಗ ಸಮೂಹ, ಪುರಸಭೆ ಚಿಕ್ಕೋಡಿ ಹಾಗೂ ಕೇಶವ ಸ್ಮೃತಿ ಟ್ರಸ್ಟ್‌ ಚಿಕ್ಕೋಡಿ ಆಶ್ರಯದಲ್ಲಿ ನಿರ್ಮಿಸಿದ ಕೊರೊನಾ ಹರಡುವಿಕೆ ತಡೆಗಟ್ಟುವ ನೈರ್ಮಲೀಕರಣ ಮೂರು ಘಟಕಗಳ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ಕೊರೊನಾ ತಡೆಗಟ್ಟಲು ಇಂತಹ ನೈರ್ಮಲೀಕರಣ ಘಟಕಗಳ ಪಾತ್ರ ಮುಖ್ಯವಾಗಿವೆ ಎಂದರು. ಬಸವ ಪ್ರಸಾದ ಜೊಲ್ಲೆ ಮಾತನಾಡಿ, ದೇಶಾದ್ಯಂತ ಮತ್ತು ರಾಜ್ಯದಲ್ಲಿ ಕೂಡ ಕೊರೊನಾ ವೈರಸ್‌ ಮಹಾಮಾರಿ ಹಾವಳಿ ಹೆಚ್ಚಾಗಿದ್ದರಿಂದ ಎಲ್ಲರಿಗೂ ಸ್ಯಾನಿಟೈಸರ್‌ ಮುಖ್ಯ. ಪೊಲೀಸರು, ವೈದ್ಯರು ಹಾಗೂ ಪೌರ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ. ಅಂಥವರು ಈ ಘಟಕಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.

ಧುರೀಣ ಜಗದೀಶ ಕವಟಗಿಮಠ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಳಗಾವಿ ವಿಭಾಗದ ಸಂಜಯ ಅಡಕೆ, ಮನೋಜ ನಾಯಿಕ, ವಿಠ್ಠಲ ಶಿಂಧೆ, ಸಿಎಂಒ ಸಂತೋಷ ಕೊಣ್ಣೂರೆ, ಡಾ| ಸುಂದರ ರೋಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next