Advertisement

ಲಾಕ್‌ಡೌನ್‌ ವಿನಾಯ್ತಿ: ರಸ್ತೆಗಿಳಿದ ಜನ

01:09 PM Apr 26, 2020 | Naveen |

ಚಿಕ್ಕಮಗಳೂರು: ನಗರದ ಹನುಮಂತಪ್ಪ ವೃತ್ತದಲ್ಲಿ ವಾಹನ ಸಂಚಾರದ ದೃಶ್ಯ. ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ವಿಧಿಸಿದ್ದ ಎರಡನೇ ಹಂತದ ಲಾಕ್‌ಡೌನ್‌ಗೆ ಕೆಲ ವಿನಾಯಿತಿಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನೀಡಿದ್ದು ಈ ವಿನಾಯಿತಿಗಳ ಹಿನ್ನೆಲೆಯಲ್ಲಿ ಶನಿವಾರ ಸಾರ್ವಜನಿರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದ ದೃಶ್ಯಗಳು ಕಂಡು ಬಂದಿತು.

Advertisement

ಲಾಕ್‌ಡೌನ್‌ಗೆ ವಿನಾಯಿತಿ ನೀಡಿ ಎರಡು ದಿನಗಳನ್ನು ಕಳೆದಿದ್ದು, ಕೆಲವು ಆಯ್ದ ಕ್ಷೇತ್ರಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಆದರೆ, ವಿನಾಯಿತಿಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೇ ಜನರು ಬೇಕಾಬಿಟ್ಟಿಯಾಗಿ ನಗರದ ರಸ್ತೆಗಳಲ್ಲಿ ತಿರುಗಾಡಲು ಶುರುವಿಟ್ಟುಕೊಂಡಿದ್ದಾರೆ. ಶನಿವಾರ ಬಹುತೇಕ ಅಂಗಡಿ ಮಾಲೀಕರು ಅಂಗಡಿಗಳನ್ನು ತೆರೆದು ವ್ಯಾಪಾರ ವಹಿವಾಟಿಗೆ ಮುಂದಾದ್ದರು. ಲಾಕ್‌ಡೌನ್‌ ನಿರ್ಬಂಧಗಳಿಂದ ವಿನಾಯಿತಿ ಇಲ್ಲದ ಅಂಗಡಿ ಮಾಲೀಕರು ಅರ್ಥ ಬಾಗಿಲು ತೆರೆದು ವಹಿವಾಟಿಗೆ ಮುಂದಾಗಿದ್ದರು.

ಇದನ್ನು ಗಮನಿಸಿದ ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗಿ ವಿನಾಯಿತಿಯಿಲ್ಲದ ಅಂಗಡಿ ಮುಂಗಟ್ಟುಗಳನ್ನು ಬಾಗಿಲು ಹಾಕಿಸಿದರು. ಸರ್ಕಾರ ವಿನಾಯಿತಿ ನೀಡಿರುವ ಪುಸ್ತಕ ಮಾರಾಟ ಮಳಿಗೆ, ಮೊಬೈಲ್‌ ರೀಚಾರ್ಜ್‌ ಅಂಗಡಿ, ಗ್ಯಾರೇಜ್‌, ಕೃಷಿ ಯಂತ್ರೋಪಕರಣ ಅಂಗಡಿಗಳು ಬಾಗಿಲು ತೆರೆದು ವ್ಯಾಪಾರ ವಹಿವಾಟಿಗೆ ಮುಂದಾಗಿದ್ದರು. ಆದರೆ, ಅಂಗಡಿಗಳಲ್ಲಿ ಗ್ರಾಹಕರ ಕೊರತೆಯಿಂದಾಗಿ ಅಂಗಡಿ ಮಾಲೀಕರು ವ್ಯಾಪಾರ ವಹಿವಾಟು ಇಲ್ಲದೆ ಅಂಗಡಿಗಳ ಮುಂದೆ ಸುಮ್ಮನೆ ಕುಳಿತ್ತಿದ್ದ ದೃಶ್ಯಗಳು ಕಂಡು ಬಂದವು.

Advertisement

Udayavani is now on Telegram. Click here to join our channel and stay updated with the latest news.

Next