Advertisement

ಪಾನಿಪೂರಿಯಲ್ಲಿ ಹುಳಗಳು: ಚಿಕ್ಕಮಗಳೂರಿನಲ್ಲಿ ವ್ಯಾಪಾರಸ್ಥರಿಗೆ ಧರ್ಮದೇಟು

12:43 PM Oct 22, 2021 | Team Udayavani |

ಚಿಕ್ಕಮಗಳೂರು : ನಗರದ ಎಂ.ಜಿ.ರಸ್ತೆಯಲ್ಲಿ ಪಾನಿಪೂರಿಯಲ್ಲಿ ಹುಳಗಳು ಪತ್ತೆಯಾದ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಯುವಕರಿಂದ ಪಾನಿಪೂರಿ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಧರ್ಮದೇಟು ನೀಡಿದ ಘಟನೆ ಬುಧವಾರ ಸಂಜೆ ನಡೆದಿದೆ.

Advertisement

ಪಾನಿ ಪೂರಿ ಅಂಗಡಿಯಲ್ಲಿ ದುರ್ನಾತ ಬೀರುತ್ತಿದ್ದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಯುವಕರು ಪರಿಶೀಲನೆ ನಡೆಸಿದ್ದು, ಮಡಿಕೆ ಪಾನಿಪೂರಿ (ಗೋಲ್ಗಪ್ಪ) ಜೊತೆಗೆ ಹುಳಗಳು ಕಂಡು ಬಂದಿವೆ. ಸರಿಯಾಗಿ ಪರಿಶೀಲಿಸಿದಾಗ ಕೊಳೆತ ಆಲೂಗೆಡ್ಡೆಗಳೂ ಪತ್ತೆಯಾಗಿವೆ.

ಈ ವೇಳೆ ರೊಚ್ಚಿಗೆದ್ದ ಯುವಕರು ವ್ಯಾಪಾರಸ್ಥರಿಗೆ ಥಳಿಸಿದ್ದಾರೆ.

ಈ ವಿಡಿಯೋ ಚಿಕ್ಕಮಗಳೂರಿನಲ್ಲಿ ವೈರಲ್ ಆಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next