Advertisement

ಗನ್ ತೋರಿಸಿದ ಪಿಎಸ್ಐಗೆ ಗ್ರಾಮಸ್ಥರಿಂದ ಥಳಿತ, ಏನಿದು ವಿವಾದ?

12:21 PM Feb 28, 2017 | Sharanya Alva |

ಚಿಕ್ಕಮಗಳೂರು: ಮುಂದುಗಡೆ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಗೂಂಡಾಗಿರಿ ಪ್ರದರ್ಶಿಸಿದ ಪಿಎಸ್ಐಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಚಿಕ್ಕಮಗಳೂರಿನ ಸಿರಗುಂದ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

Advertisement

ಚಿಕ್ಕಮಗಳೂರಿನ ಸಿರಗುಂದ ಗ್ರಾಮದ ಬಳಿ ಕಾರೊಂದು ಮುಂದೆ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಆಗ ಡಿಕ್ಕಿ ಹೊಡೆದುದನ್ನು ಪ್ರಶ್ನಿಸಿದಾಗ, ಹಿಂಬದಿ ಕಾರಿನಲ್ಲಿದ್ದ ಪಿಎಸ್ಐ ಪಿಸ್ತೂಲ್ ಹೊರಗೆ ತೆಗೆದು, ಏಯ್ ಮಗನೇ ಮೂಳೆ ಮುರಿದು ಕೈಗೆ ಕೊಡ್ತೀನಿ ಎಂದು ಆವಾಜ್ ಹಾಕಿದ್ದ ಪ್ರಸಂಗ ನಡೆಯಿತು.

ಆಗ ಗ್ರಾಮಸ್ಥರು ಒಟ್ಟಾಗಿ ಮಫ್ತಿಯಲ್ಲಿದ್ದ ಪಿಎಸ್ಐ ಗವಿರಾಜು ಹಾಗೂ ಇನ್ನಿಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದರು, ಈ ಸಂದರ್ಭದಲ್ಲಿ ವಾಗ್ವಾದ ನಡೆದಾಗ ಗ್ರಾಮಸ್ಥರು ಮೂವರು ಪೊಲೀಸರನ್ನು ಥಳಿಸಿ ಕೂಡಿ ಹಾಕಿದ್ದರು. 

ಗಲಾಟೆ ವಿಕೋಪಕ್ಕೆ ಹೋದಾಗ ಸ್ಥಳಕ್ಕೆ ಪೊಲೀಸರ ಪಡೆ ಆಗಮಿಸಿತ್ತು. ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಕೂಡಾ ಸ್ಥಳಕ್ಕೆ ಬಂದಾಗ ಪುಂಡಾಟಿಕೆ ನಡೆಸುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡರು. ಪಿಎಸ್ಐ ಜೊತೆ ಹೇಗೆ ನಡೆದುಕೊಳ್ಳಬೇಕು ಅಂತ ಗೊತ್ತಿಲ್ವೇನ್ರೋ…ಹಲ್ಲು ಮುರಿದು ಕೈಗೆ ಕೊಡ್ತೀನಿ ಎಂದು ಆವಾಜ್ ಹಾಕಿದ್ದರು. ಪ್ರಕರಣದ ಸಂಬಂಧ 6 ಮಂದಿಯನ್ನು ವಶಕ್ಕೆ ತೆಗೆದುಕೊಂಡು ಕೇಸ್ ಹಾಕಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next