Advertisement

Chikkamagaluru: ಅರಣ್ಯಾಧಿಕಾರಿಗಳ ನಿಂದನೆ, ಕಿತ್ತಾಟ: ಆಡಿಯೋ ವೈರಲ್‌ ; ಸ್ಥಳೀಯರ ಆಕ್ರೋಶ

01:17 PM Aug 16, 2023 | Team Udayavani |

ಚಿಕ್ಕಮಗಳೂರು : ಕುಡಿದ ಮತ್ತಿನಲ್ಲಿ ಕರ್ತವ್ಯ ಮರೆತ ಅಧಿಕಾರಿಗಳಿಂದ ಪರಸ್ಪರ ನಿಂದನೆ, ಕಿತ್ತಾಟ ನಡೆದಿದ್ದು, ಇದಕ್ಕೆ ಸಂಬಂಧಿಸಿದ ಫೋನ್‌ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.

Advertisement

ವಸತಿಗೃಹದ ಶೌಚಾಲಯದಲ್ಲಿನ ಪೈಪ್ ಒಡೆದು ಹೋಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಬ್ಬರು ಕಿತ್ತಾಡಿಕೊಂಡಿದ್ದು, ಇಬ್ಬರು ಅಧಿಕಾರಿಗಳ ವಿರುದ್ಧ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ವಲಯ ಅರಣ್ಯಾಧಿಕಾರಿ ಮೋಹನ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ನವೀನ್ ಕಿತ್ತಾಟದ ಫೋನ್ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವಾಚ್ಯ ಶಬ್ದಗಳಿಂದ ಸಣ್ಣ ಮಕ್ಕಳಂತೆ ವರ್ತಿಸಿದ್ದಾರೆ ಎನ್ನಲಾಗಿದೆ.

ಅರಣ್ಯ ವಸತಿ ಗೃಹದಲ್ಲಿ ನಲ್ಲಿ ಪೈಪ್ ಹೊಡೆದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳ ನಡುವೆ ಅವಾಚ್ಯ ಶಬ್ದಗಳಿಂದ ಪರಸ್ಪರ ಬೈಗುಳ, ಕಿತ್ತಾಟ ನಡೆದಿದ್ದು, ಇಬ್ಬರು ಮೂಡಿಗೆರೆ ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಡಿದು ಮಾತಾಡಬೇಡ ಎಂದ ನವೀನ್ ಗೆ ಮೋಹನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಸಣ್ಣ ವಿಚಾರ ವೀಕೋಪಕ್ಕೆ ತಿರುಗಿ ಬೈದಾಡಿಕೊಂಡಿರುವ ಅಧಿಕಾರಿಗಳಿಗೆ ಸಣ್ಣ ಮಕ್ಕಳಂತೆ ಅರಣ್ಯಾಧಿಕಾರಿಗಳು ಕಿತ್ತಾಡಿಕೊಂಡಿದ್ದಾರೆ ಎಂದು ಸ್ಥಳಿಯರು ಆಕ್ರೋಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next