Advertisement

ಚಿಕ್ಕಮಗಳೂರು: ಮಳೆಯ ಅಬ್ಬರಕ್ಕೆ ಬೆಚ್ಚಿದ ರೈತರು; ಕೊಚ್ಚಿ ಹೋದ ಭತ್ತದ ಗದ್ದೆಗಳು

09:46 AM Oct 23, 2019 | Team Udayavani |

ಚಿಕ್ಕಮಗಳೂರು: ಮಳೆಯ ಆರ್ಭಟಕ್ಕೆ ಕಾಫಿ ನಾಡು ಚಿಕ್ಕಮಗಳೂರು ಅಕ್ಷರಶಃ ನಲುಗಿ ಹೋಗಿದ್ದು ಭತ್ತದ ಗದ್ದೆಗಳು ಸಂಪೂರ್ಣ ಕೊಚ್ಚಿ ಹೋಗಿವೆ.

Advertisement

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಪ್ಪ, ಎನ್ ಆರ್ ಪುರ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನಿನ್ನೆ ರಾತ್ರಿಯಿಡಿ ಸುರಿದ ಭಾರೀ ಮಳೆಯ ಅಬ್ಬರಕ್ಕೆ ಉಜ್ಜಿನಿ- ಬಿದರೆ ಗ್ರಾಮದಲ್ಲಿನ ಭತ್ತದ ಗದ್ದೆಗಳು ನೆಲಕಚ್ಚಿವೆ.

ಮಲೆನಾಡಿನಲ್ಲಿ ಮಳೆಯ ಅಬ್ಬರಕ್ಕೆ  ರೈತರು ಬೆಚ್ಚಿಬಿದ್ದಿದ್ದು ಬೆಳೆದ ಫಸಲು ಕೈಗೆ ಬಾರದೆ ದಿಕ್ಕೆತೋಚದಂತಾಗಿದ್ದಾರೆ. ಗದ್ದೆಯ ಪೂರ್ತಿ ನೀರು ಹರಿಯುತ್ತಿದ್ದು  ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next