Advertisement

ಲಾರಿಗೆ ವಿದ್ಯುತ್ ತಂತಿ ತಗುಲಿ ಲಾರಿ ಕ್ಲೀನರ್ ಸ್ಥಳದಲ್ಲೇ ಸಾವು

01:02 PM Aug 08, 2021 | Team Udayavani |

ಚಿಕ್ಕಮಗಳೂರು : ಲಾರಿಗೆ ವಿದ್ಯುತ್ ತಂತಿ ತಗುಲಿ ಲಾರಿಯಲ್ಲಿದ್ದ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಳಸ ತಾಲೂಕಿನ ತೋಟದೂರು ಗ್ರಾಮ ಪಂಚಾಯಿತಿಯ ಬಾಳೆಹೊಳೆ ಪಡೀಲ್ ಎಂಬಲ್ಲಿ ಶನಿವಾರ ಮಧ್ಯರಾತ್ರಿ ಸಂಭವಿಸಿದೆ.

Advertisement

ಮೂಲತಃ ತರೀಕೆರೆ ನಿವಾಸಿಯಾದ ರಫೀಕ್ (35 ವರ್ಷ) ಮೃತಪಟ್ಟ ದುರ್ದೈವಿಯಾಗಿದ್ದರೆ, ಹತ್ತು ಚಕ್ರಗಳನ್ನು ಹೊಂದಿದ್ದ ಲಾರಿ ಬಾಳೆಹೊಳೆ ಪಡೀಲ್ ಬಳಿ ಬರುತ್ತಿದ್ದಂತೆ ವಿದ್ಯುತ್ ತಂತಿ ತಗುಲಿದೆ ಈ ವೇಳೆ ಲಾರಿ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಕಳಸ ಪಿಎಸ್ಐ ಹರ್ಷವರ್ಧನ್ ಹಾಗೂ ಸಿಬ್ಬಂದಿ ಮತ್ತು ಆಂಬುಲೆನ್ಸ್ ಚಾಲಕರಾದ ಶರೀಫ್ ತುರ್ತಾಗಿ ತೆರಳಿ ಶವ ಕಳಸ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಇದನ್ನೂ ಓದಿ :ತಿರುಮಲದೊಡೆಯನಿಗೆ ‘ನವನೀತ ಸೇವೆ’ : ದೇಸಿ ಹಸುವಿನ ತಳಿಗಳನ್ನು ರಕ್ಷಿಸಲು ಟಿಟಿಡಿ ನಿರ್ಧಾರ

 

Advertisement
Advertisement

Udayavani is now on Telegram. Click here to join our channel and stay updated with the latest news.

Next