Advertisement

Chikkamagaluru: ದ್ವೇಷದಿಂದ ಒಂದು ಎಕರೆ ಅಡಿಕೆ ತೋಟ ಕಡಿದು ನಾಶ

04:25 PM Sep 30, 2023 | Team Udayavani |

ಚಿಕ್ಕಮಗಳೂರು: ಕುಟುಂಬ ದ್ವೇಷದ ಹಿನ್ನೆಲೆ ಒಂದು ಎಕರೆ ಅಡಿಕೆ ತೋಟವನ್ನು ಕಡಿದು ನಾಶ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕು ಸಕಲಾಯಪಟ್ಟಣ ಸಮೀಪದ ಪಿಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಚಿಕ್ಕಪ್ಪ ದೊಡ್ಡಪ್ಪ ಮಕ್ಕಳ ನಡುವೆ ಆಸ್ತಿಗಾಗಿ ಗಲಾಟೆ ನಡೆದಿದ್ದು 400 ಅಡಿಕೆ ಗಿಡಗಳನ್ನು ರಾತ್ರೋರಾತ್ರಿ ಕಡಿದು ನಾಶಪಡಿಸಲಾಗಿದೆ.ಪಿಳ್ಳೆನಹಳ್ಳಿ ಗ್ರಾಮದ ಮಹೇಶ್ ನಾಯಕ್ ಎಂಬುವರಿಗೆ ಸೇರಿದ ತೋಟ ಇದಾಗಿದ್ದು, ಸಕರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next