Advertisement

ಪಿಯುಸಿ ಪರೀಕ್ಷೆ: 9,671 ವಿದ್ಯಾರ್ಥಿಗಳು

07:59 PM Apr 22, 2022 | Team Udayavani |

ಚಿಕ್ಕಮಗಳೂರು: ಏ.22ರಿಂದ ದ್ವಿತೀಯ ಪಿಯುಸಿಪರೀಕ್ಷೆ ಆರಂಭವಾಗಲಿದ್ದು, ಜಿಲ್ಲೆಯ 18 ಪರೀಕ್ಷಾಕೇಂದ್ರಗಳಲ್ಲಿ 9,671 ವಿದ್ಯಾರ್ಥಿಗಳು ಪರೀಕ್ಷೆಬರೆಯಲಿದ್ದಾರೆ.8,713 ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆಬರೆಯಲಿದ್ದು 320 ಖಾಸಗಿ ವಿದ್ಯಾರ್ಥಿಗಳು, 638ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದಂತೆ 4,597ವಿದ್ಯಾರ್ಥಿಗಳು, 5,074 ವಿದ್ಯಾರ್ಥಿನಿಯರು ಪರೀಕ್ಷೆಬರೆಯಲಿದ್ದಾರೆ.

Advertisement

ಕಲಾ ವಿಭಾಗದಲ್ಲಿ 3,476 ವಿದ್ಯಾರ್ಥಿಗಳು,ವಾಣಿಜ್ಯ ವಿಭಾಗದಲ್ಲಿ 3,518 ವಿದ್ಯಾರ್ಥಿಗಳು,ವಿಜ್ಞಾನ ವಿಭಾಗದಲ್ಲಿ 2,657 ವಿದ್ಯಾರ್ಥಿಗಳುಪರೀಕ್ಷೆ ನೋಂದಾಯಿಸಿಕೊಂಡಿದ್ದು, ಪರೀಕ್ಷೆಗೆಹಾಜರಾಗಲಿದ್ದಾರೆ.ಚಿಕ್ಕಮಗಳೂರು ನಗರದಲ್ಲಿ 5 ಪರೀಕ್ಷಾಕೇಂದ್ರಗಳು, ಕಡೂರು 2, ಅಜ್ಜಂಪುರ ತಾಲೂಕಿನಲ್ಲಿ1, ತರೀಕೆರೆ 2, ಸಖರಾಯಪಟ್ಟಣ 1, ಕೊಪ್ಪ, ಶೃಂಗೇರಿಹಾಗೂ ನರಸಿಂಹರಾಜಪುರ ತಲಾ 1 ಪರೀಕ್ಷಾ ಕೇಂದ್ರ,ಬಾಳೆಹೊನ್ನೂರು 1, ಬೀರೂರು 1 ಮೂಡಿಗೆರೆ 1ಮತ್ತು ಕಳಸದಲ್ಲಿ 1 ಕೇಂದ್ರವನ್ನು ತರೆಯಲಾಗಿದೆ.ಚಿಕ್ಕಮಗಳೂರು ಖಜಾನೆ ಮತ್ತುನರಸಿಂಹರಾಜಪುರ ಉಪ ಖಜಾನೆಯಲ್ಲಿಪ್ರಶ್ನೆ ಪತ್ರಿಕೆಗಳನ್ನು ಪೊಲೀಸ್‌ ಕಾವಲಿನಲ್ಲಿಭದ್ರವಾಗಿಡಲಾಗಿದ್ದು, ನಾಳೆ ಪರೀಕ್ಷಾ ಕೇಂದ್ರಗಳಿಗೆವಿತರಣೆಯಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next