Advertisement

ಬಿಕೋ ಎಂದ ಪ್ರವಾಸಿ ತಾಣಗಳು

05:13 PM Jan 09, 2022 | Team Udayavani |

ಚಿಕ್ಕಮಗಳೂರು: ಕೋವಿಡ್‌ ಸೋಂಕು ಹರಡುವುದನ್ನುನಿಯಂತ್ರಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ವೀಕೆಂಡ್‌ಕರ್ಫ್ಯೂ ವಿಧಿ ಸಿದ್ದು, ಪ್ರವಾಸೋದ್ಯಮಕ್ಕೆ ನಿರ್ಬಂಧವಿ ಧಿಸಿದ್ದರಿಂದ ನಿತ್ಯ ಪ್ರವಾಸಿಗರಿಂದ ಗಿಜುಗುಡುತ್ತಿದ್ದ ಪ್ರವಾಸಿತಾಣಗಳು ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿ ದ್ದವು.

Advertisement

ಜಿಲ್ಲೆಯ ಮುಳ್ಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯಬಾಬಾಬುಡನ್‌ಸ್ವಾಮಿ ದರ್ಗಾ, ಅತ್ತಿಗುಂಡಿ,ಮಾಣಿಕ್ಯಧಾರಾ, ಕುದುರೆಮುಖ, ಕೆಮ್ಮಣ್ಣುಗುಂಡಿಸೇರಿದಂತೆ ಇತರೆ ಪ್ರವಾಸಿ ತಾಣಗಳು ಉಳಿದ ದಿನಗಳಲ್ಲಿಪ್ರವಾಸಿಗರಿಂದ ತುಂಬಿರುತ್ತಿದ್ದವು. ಇಲ್ಲಿನ ಪ್ರಕೃತಿಸೌಂದರ್ಯವನ್ನು ಸವಿದು ಜನ ತೆರಳುತ್ತಿದ್ದರು. ಜಿಲ್ಲೆಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಪ್ರವಾಸಿಗರದಂಡೇ ಹರಿದು ಬರುತ್ತಿತ್ತು.

ಪ್ರವಾಸಿ ತಾಣಗಳುಸೇರಿದಂತೆ ಚಿಕ್ಕಮಗಳೂರು ನಗರ ಹಾಗೂ ಹೋಮ್‌ ಸ್ಟೇ,ರೆಸಾಲ್ಟ್ì ಮತ್ತು ಲಾಡ್ಜ್ಗಳಲ್ಲಿ ಪ್ರವಾಸಿಗರ ದಂಡೇಇರುತ್ತಿತ್ತು. ವ್ಯಾಪಾರ- ವಹಿವಾಟು ಗರಿಗೆದರಿರುತ್ತಿತ್ತು.ಆದರೆ, ಈ ವಾರ ಕೋವಿಡ್‌ ನಿಯಂತ್ರಣಕ್ಕಾಗಿವೀಕೆಂಡ್‌ ಕರ್ಫ್ಯೂ ವಿ ಧಿಸಿದ್ದರಿಂದ ನಿತ್ಯ ಪ್ರವಾಸಿಗರಿಂದಗಿಜುಗುಡುತ್ತಿದ್ದ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೇಕಳೆಕುಂದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next