Advertisement

ರಚನಾತ್ಮಕ ಚಟುವಟಿಕೆಗೆ ಆದ್ಯತೆ

03:59 PM Nov 08, 2021 | Team Udayavani |

ಚಿಕ್ಕಮಗಳೂರು: ಅಖೀಲ ಕರ್ನಾಟಕಬ್ರಾಹ್ಮಣ ಮಹಾಸಭಾ ಪ್ರಸ್ತುತ ಕಾಲಘಟ್ಟಕ್ಕೆಹೊಂದಿಕೊಳ್ಳುವಂತೆ ಮಹತ್ತರ ಬದಲಾವಣೆತಂದು ಮಹಾಸಭಾ ಸ್ವರೂಪ ಬದಲಿಸಲುಆಲೋಚಿಸಿರುವುದಾಗಿ ಅಖೀಲ ಕರ್ನಾಟಕಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್‌)ಹಂಗಾಮಿ ಅಧ್ಯಕ್ಷ ಅಶೋಕ್‌ ಹಾರನಹಳ್ಳಿತಿಳಿಸಿದರು.

Advertisement

ಭಾನುವಾರ ನಗರದ ಬ್ರಾಹ್ಮಣಮಹಾಸಭಾದ ಸಭಾಂಗಣದಲ್ಲಿ ಅಭಿಮಾನಿಬಳಗದಿಂದ ಆಯೋಜಿಸಿದ್ದ ಸಭೆಯಲ್ಲಿಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅವರುಮತಯಾಚನೆ ಮಾಡಿ ಮಾತನಾಡಿದರು.ಬ್ರಾಹ್ಮಣ ಮಹಾಸಭಾದಲ್ಲಿಯಾವುದೇ ರೀತಿಯ ಗುಂಪುಗಾರಿಕೆಸೃಷ್ಟಿಯಾಗಬಾರದು. ಜಿಲ್ಲಾ ಪ್ರತಿನಿಧಿಗಳ ಧ್ವನಿಗೆ ಮಾನ್ಯತೆ ಇರಬೇಕು. ತಾವುಅಧ್ಯಕ್ಷರಾಗಿ ಆಯ್ಕೆಯಾದಲ್ಲಿ ಯುವಘಟಕಹಾಗೂ ಮಹಿಳಾ ಘಟಕಗಳನ್ನು ಆರಂಭಿಸಿಆ ಎರಡು ಘಟಕಗಳು ಸ್ವಾಯತ್ತತೆಯಿಂದಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿರಚನಾತ್ಮಕ ಚಟುವಟಿಕೆಯ ಮೂಲಕಯುವಕರ ಕ್ರಿಯಾಶೀಲತೆ ವೃದ್ಧಿಸಲುಅವಕಾಶ ಮಾಡಿಕೊಡುವುದಾಗಿ ತಿಳಿಸಿದರು.

ಈಗಾಗಲೇ ಬ್ರಾಹ್ಮಣ ಮಹಾಸಭೆಗೆಸಮುದಾಯದ ಕೈಗಾರಿಕೋದ್ಯಮಿಗಳುಹಾಗೂ ಅನಿವಾಸಿ ಭಾರತೀಯರಿಂದ ನಿ ಧಿಸಂಗ್ರಹಿಸಿ ಆರ್ಥಿಕವಾಗಿ ಸಂಕಷ್ಟದಲ್ಲಿರುವಪುರೋಹಿತರು ಮತ್ತು ಅಡಿಗೆ ಕೆಲಸದಲ್ಲಿನಿರತರಾಗಿರುವ ಕುಟುಂಬಗಳಿಗೆ ಸಹಾಯಮಾಡುವ ಆಲೋಚನೆ ಮಾಡಿದ್ದು, ಈ ಬಗ್ಗೆಈಗಾಗಲೇ ಕಾರ್ಯಾರಂಭಿಸಿರುವುದಾಗಿತಿಳಿಸಿದರು.ಮಹಾಸಭೆಯ ವೆಬ್‌ಸೈಟ್‌ವೊಂದನ್ನುರಚಿಸಿ ಆ ಮೂಲಕ ಸಭೆಯ ಆಡಳಿತ ಹಾಗೂನಿರ್ಧಾರಗಳು ಸದಸ್ಯರಿಗೆ ಸುಲಭವಾಗಿತಿಳಿಯಲು ಮತ್ತು ಅವರಿಂದ ಸಲಹೆಗಳನ್ನುಸ್ವೀಕರಿಸಲು ಅನುಕೂಲವಾಗುವಂತೆಮಾಡಲಾಗುವುದು. ಬ್ರಾಹ್ಮಣ ಸಮಾಜಒಟ್ಟಾಗಿ ಹೋಗಬೇಕು.

ಇಂದಿನ ಪರಿಸ್ಥಿತಿಗೆತಕ್ಕಂತೆ ಸಂಘಟನೆ ಬಲಗೊಳ್ಳಬೇಕಾಗಿದೆ.ಪ್ರತಿ ತಾಲೂಕುಗಳಲ್ಲೂ ಪ್ರತಿನಿಧಿ ಗಳಸೃಷ್ಟಿಯಾಗಬೇಕು. ಬದಲಾದ ಪರಿಸ್ಥಿತಿಗೆತಕ್ಕಂತೆ ಸೂಕ್ತ ಸ್ವರೂಪವೊಂದನ್ನು ಬ್ರಾಹ್ಮಣಮಹಾಸಭೆಗೆ ನೀಡಲು ಚುನಾವಣೆಯಲ್ಲಿಅಧ್ಯಕ್ಷ ಸ್ಥಾನಕ್ಕೆ ಸ್ಪ ರ್ಧಿಸುತ್ತಿರುವುದಾಗಿತಿಳಿಸಿದರು. ತಮಗೆ ಯಾವುದೇರೀತಿಯ ರಾಜಕೀಯ ಸ್ಥಾನ ಪಡೆಯುವಅಥವಾ ಇನ್ಯಾವುದೇ ರೀತಿಯ ಗುಂಪುರಚನೆಯ ಉದ್ದೇಶತ ಇಲ್ಲ.

ಬ್ರಾಹ್ಮಣಸಮಾಜ ಸ್ವಾವಲಂಬನೆಯಿಂದ ಹಾಗೂಸ್ವಾಭಿಮಾನದಿಂದ ಬದುಕಬೇಕೆಂಬದೃಷ್ಟಿಯಿಂದ ಆ ಸಮಾಜವನ್ನುಶಕ್ತಗೊಳಿಸುವ ಆಲೋಚನೆತಮಗಿರುವುದಾಗಿ ಹೇಳಿದರು.ಹಿರಿಯ ಪತ್ರಕರ್ತ ಸ. ಗಿರಿಜಾಶಂಕರ್‌ಪ್ರಾಸ್ತಾವಿಕವಾಗಿ ಮಾತನಾಡಿ, ಈಗಿನಕಾಲಘಟ್ಟದಲ್ಲಿ ಬ್ರಾಹ್ಮಣ ಸಮಾಜಕ್ಕೆಎದುರಾಗುತ್ತಿರುವ ಸವಾಲುಗಳನ್ನುಎದುರಿಸಿ, ಆ ಸಮಾಜವನ್ನುಸದೃಢವಾಗಿಸಲು ಚಾಲಕ ಶಕ್ತಿಯೊಂದುಅಗತ್ಯವಾಗಿದೆ. ಅದಕ್ಕೆ ಸೂಕ್ತವಾದವರುಅಶೋಕ್‌ ಹಾರನಹಳ್ಳಿ. ಅವರನ್ನು ಗೆಲ್ಲಿಸಲುಸಮಾಜ ಸದೃಢವಾಗಿ ನಿಲ್ಲಬೇಕೆಂದುಹೇಳಿದರು.ಚಿಕ್ಕಮಗಳೂರು ಬ್ರಾಹ್ಮಣಮಹಾಸಭಾದ ಮಾಜಿ ಅಧ್ಯಕ್ಷ ಡಿ.ಎಚ್‌.ನಟರಾಜ್‌ ಮಾತನಾಡಿ, ಅಶೋಕ್‌ಹಾರನಹಳ್ಳಿ ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಸೂಕ್ತಅಭ್ಯರ್ಥಿಯಾಗಿದ್ದು, ಅವರ ಗೆಲುವು ನಮ್ಮಗೆಲುವಾಗಲಿದೆ ಎಂದರು.

Advertisement

ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷ ಪಿ.ಮಂಜುನಾಥ ಜೋಷಿ ಮಾತನಾಡಿ,ಅಖೀಲ ಕರ್ನಾಟಕ ಮಹಾಸಭೆಯಲ್ಲಿಜನಾಂಗದ ಅಭಿವೃದ್ಧಿಗೆ ಅಗತ್ಯವಾದಬದಲಾವಣೆಗಳು ಅಶೋಕ್‌ ಅವರುಅಧ್ಯಕ್ಷರಾದಾಕ್ಷಣ ಆಗುತ್ತದೆ ಎಂಬ ಭರವಸೆನಮಗಿದೆ ಎಂದರು.ನಗರದ ಮಹಾಲಕ್ಷಿ ¾à ದೇವಾಲಯದಮುಖ್ಯಸ್ಥ ವಿ.ರಾಮರಾವ್‌ ಮಾತನಾಡಿ,ಸಮಾಜಕ್ಕೆ ಹೊಸ ದೃಷ್ಟಿಕೋನ ನೀಡುವಶಕ್ತಿ ಅಶೋಕ್‌ ಹಾರನಹಳ್ಳಿ ಅವರಿಗಿದ್ದು,ಅವರನ್ನು ಗೆಲ್ಲಿಸುವುದು ಅತ್ಯಂತ ಅಗತ್ಯವಿದೆಎಂದು ತಿಳಿಸಿದರು.

ಬ್ರಾಹ್ಮಣ ಅಭಿವೃದ್ಧಿ ಪ್ರಾ ಧಿಕಾರದನಿರ್ದೇಶಕ ಛಾಯಾಪತಿ, ಎಕೆಬಿಎಂಎಸ್‌ನಹಿರಿಯ ಉಪಾಧ್ಯಕ್ಷ ಲಕ್ಷಿ ¾àನಾರಾಯಣಭಟ್‌, ಚಿಕ್ಕಮಗಳೂರು ಬ್ರಾಹ್ಮಣಮಹಾಸಭಾದ ಮಾಜಿ ಉಪಾಧ್ಯಕ್ಷ ಡಿ.ಎಲ್‌.ರಾಮಾನುಜ ಅಯ್ಯಂಗಾರ್‌, ಬೆಂಗಳೂರಿನರಾಷ್ಟ್ರೀಯ ಸಹಕಾರ ಬ್ಯಾಂಕ್‌ ಅಧ್ಯಕ್ಷಎಚ್‌.ಆರ್‌. ಸುರೇಶ್‌, ಮುಖಂಡರಾದಹಿರಣ್ಣಯ್ಯ, ಸುಬ್ರಹ್ಮಣ್ಯ ಇದ್ದರು.ಬಿಎಂಎಸ್‌ ನಿರ್ದೇಶಕಿ ಶಶಿಕಲಾ ಶಿವಶಂಕರ್‌ಪ್ರಾರ್ಥಿಸಿದರು. ನಿರ್ದೇಶಕಿಯರಾದಸುಮಾಪ್ರಸಾದ್‌ ಕಾರ್ಯಕ್ರಮ ನಿರೂಪಿಸಿ,ಎಸ್‌.ಶಾಂತಕುಮಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next