Advertisement

ಕೇದಾರನಾಥದಲ್ಲಿ ಶಾರದಾ ಪೀಠದ ಪ್ರತಿನಿಧಿ

03:07 PM Nov 07, 2021 | Team Udayavani |

ಶೃಂಗೇರಿ: ಉತ್ತರಾಖಂಡದ ಕೇದಾರನಾಥದಲ್ಲಿ ನಡೆದಜಗದ್ಗುರು ಶ್ರೀ ಆದಿ ಶಂಕರಚಾರ್ಯರ ಪ್ರತಿಮೆಅನಾವರಣ ಸಮಾರಂಭದಲ್ಲಿ ಶೃಂಗೇರಿ ಶ್ರೀ ಶಾರದಾಪೀಠದ ಪ್ರತಿನಿ ಧಿಯಾಗಿ ಶ್ರೀಮಠದ ಪುರೋಹಿತಶಿವಕುಮಾರ ಶರ್ಮ ಭಾಗವಹಿಸಿದ್ದರು.

Advertisement

ಶ್ರೀ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಪುನರ್‌ನಿರ್ಮಾಣಗೊಂಡ ಅವರ ಪ್ರತಿಮೆಯನ್ನು ಪ್ರಧಾನಿನರೇಂದ್ರ ಮೋದಿ ರಾಷ್ಟ್ರಕ್ಕೆ ಸಮರ್ಪಿಸಿದರು. ಉಭಯಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಗುರುಭವನದಲ್ಲಿ ಶ್ರೀ ಶಂಕರಚಾರ್ಯರಿಗೆ ವಿಶೇಷಪೂಜೆ ಸಲ್ಲಿಸಿ,ಪ್ರಸಾದ ಪೂರ್ವಕವಾಗಿ ಶ್ರೀಮಠದಪ್ರತಿನಿ ಧಿ ಮೂಲಕ ಸಂದೇಶವನ್ನು ಕಳುಹಿಸಿದ್ದರು.

ಅಲ್ಲದೇ ಶ್ರೀಮಠದ ಶ್ರೀ ಚಂದ್ರಶೇಖರಭಾರತೀ ಸಭಾಂಗಣದಲ್ಲಿ ಎಲ್‌ಇಡಿ ಸ್ಕ್ರೀನ್‌ಮೂಲಕ ಉದ್ಘಾಟನೆಯ ನೇರ ಪ್ರಸಾರ ವ್ಯವಸ್ಥೆಮಾಡಲಾಗಿತ್ತು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,ವಿಧಾನ ಪರಿಷತ್‌ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌,ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಸಿ.ಟಿ. ರವಿ, ಮಾಜಿ ಶಾಸಕ ಡಿ.ಎನ್‌. ಜೀವರಾಜ್‌,ಶ್ರೀಮಠದ ಆಡಳಿತಾ ಧಿಕಾರಿ ಡಾ| ವಿ.ಆರ್‌.ಗೌರಿಶಂಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next