Advertisement

ವಿದ್ಯುತ್ ತಂತಿ ದುರಸ್ಥಿ ವೇಳೆ ಅವಘಡ : ಇಬ್ಬರು ಸ್ಥಳದಲ್ಲೇ ಸಾವು, ಇನ್ನೋರ್ವನಿಗೆ ಗಂಭೀರ ಗಾಯ

09:38 PM May 25, 2022 | Team Udayavani |

ಚಿಕ್ಕಬಳ್ಳಾಪುರ  : ವಿದ್ಯುತ್ ಲೈನ್ ದುರಸ್ಥಿಗೊಳಿಸುವ ವೇಳೆಯಲ್ಲಿ ವಿದ್ಯುತ್ ಸ್ಪರ್ಶಸಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಳಗವಾರ ಸಮೀಪ ಸಂಭವಿಸಿದೆ.

Advertisement

ಮೃತಪಟ್ಟವರನ್ನು ಸಂಜು(22) ಮತ್ತು ಸಿದ್ದಪ್ಪ(20 )ಎಂದು ಗುರುತಿಸಲಾಗಿದ್ದು ಚಿಂತಾಜನಕ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ಪರ್ವೇಜ್(24) ಎಂದು ಗುರುತಿಸಲಾಗಿದೆ.

ಬೆಂಗಳೂರು ರಸ್ತೆಯ ತಳಗವಾರ ಸಮೀಪ ವಿದ್ಯುತ್ ತಂತಿ ದುರಸ್ಥಿ ಮಾಡುತ್ತಿದ್ದ ಸಂದರ್ಭದಲ್ಲಿ ಇಬ್ಬರು ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ಕಳುಹಿಸಲಾಗಿದೆ.

ಗುತ್ತಿಗೆದಾರರಾದ ತುಮಕೂರಿನ ರಾಜ್ ಎಲೆಕ್ಟಿಕಲ್ಸ್ ಎಂಬವರ ಬಳಿ ದಿನಗೂಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಇಂದು ತಳಗವಾರ ಸಮೀಪ 66 ಕೆ.ವಿ ಲೈನ್ ತಂತಿಯ ಕಂಬದಲ್ಲಿ ವಿದ್ಯುತ್ ಸರಬರಾಜು ಆಗುತ್ತಿದ್ದ ಕಂಬದ ಕೆಳ ಹಂತದ ಕಾಮಗಾರಿಯಲ್ಲಿ ತೊಡಗಿದ್ದರು ಎನ್ನಲಾಗಿದೆ, ಕಾರ್ಮಿಕನೋರ್ವ ಕೆಳಗಿನಿಂದ ತಂತಿಯೊಂದು ಮೇಲೆಕ್ಕೆ ಎಸೆದಾಗ ಕಾರ್ಮಿಕರು ಮಾಡುತ್ತಿದ್ದ ತಲೆಯ ಮೇಲೆ ಇದ್ದ 66 ಕೆವಿ ತಂತಿಗೆ ತಗಲಿ ಕಾರ್ಮಿಕರಿಗೆ ತಗಲಿದ ತಕ್ಷಣ ಮೇಲೆ ಇದ್ದ ಇಬ್ಬರಿಗೆ ಮತ್ತು ಕೆಳಗೆ ಇದ್ದ ಓರ್ವನಿಗೆ ವಿದ್ಯುತ್ ತಗಲಿದೆ.

ಇದನ್ನೂ ಓದಿ : ಕೊರಟಗೆರೆ: ವಿಷಪೂರಿತ ಹಾವು ಕಚ್ಚಿ ಕೂಲಿ ಕಾರ್ಮಿಕ ಮಹಿಳೆ ಸಾವು

Advertisement

ಮೇಲೆ ಇದ್ದ ಇಬ್ಬರು ವಿದ್ಯುತ್ ತಗಲಿ ಕಂಬದಿಂದ ಕೆಳಕ್ಕೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಮತ್ತೊಬ್ಬನಿಗೆ ತೀವ್ರವಾಗಿ ಗಾಯವಾಗಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದಾನೆ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆಸ್ಪತ್ರೆಗೆ ರವಾನಿಸಲಾಗಿದೆ, ಸ್ಥಳಕ್ಕೆ ಹಿರಿಯ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next