Advertisement

Chikkaballapura; ಕಡಲೆಕಾಯಿ ಪರಿಷೆಗೆ ಬೊಮ್ಮಾಯಿ, ಅಶೋಕ್ ಭೇಟಿ

04:31 PM Dec 31, 2023 | Team Udayavani |

ಚಿಕ್ಕಬಳ್ಳಾಪುರ: ನಗರದ ಹೊರ ವಲಯದ ಆದಿಚುಂಚನಗಿರಿ ಶಾಖಾ ಮಠದ ಆವರಣದಲ್ಲಿ ಭಾನುವಾರ ನಡೆದ ಕಡಲೆಕಾಯಿ ಪರಿಷೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಪಾಲ್ಗೊಂಡಿದ್ದರು.

Advertisement

ಈ ವೇಳೆ ಬೊಮ್ಮಾಯಿ ಹಾಗೂ ಆರ್.ಅಶೋಕ್ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಂಜನೇಯನ ದರ್ಶನ ಪಡೆದರು. ಈ ವೇಳೆ ಉಪಸ್ಥಿತರಿದ್ದ ಚುಂಚಶ್ರೀಗಳು ಬೊಮ್ಮಾಯಿ ಹಾಗು ಅಶೋಕ್ ಅವರಿಗೆ ಸನ್ಮಾನಿಸಿ ಮಠದ ಪರವಾಗಿ ಗೌರವಿಸಿದರು.

ಬಳಿಕ ವೀರಾಂಜನೇಯಸ್ವಾಮಿ ರಥೋತ್ಸವ ಹಾಗು ಕಡಲೆ ಕಾಯಿ ಪರಿಷೆ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next