Advertisement

Chikkaballapur; ಪುನೀತ್ ಅಶಯ ಈಡೇರಿಸಲು ಪ್ರಾದೇಶಿಕ ಪಕ್ಷವಾಗಿ ಶ್ರಮ ಸಮಾಜ ಪಕ್ಷ‌ ಸ್ಥಾಪನೆ

12:28 PM Jan 12, 2024 | Team Udayavani |

ಚಿಕ್ಕಬಳ್ಳಾಪುರ: ನಟ ದಿ.ಪುನೀತ್ ರಾಜಕುಮಾರ ಅವರ ಅಶಯಗಳನ್ನು ಈಡೇರಿಸಲು ರಾಜ್ಯದಲ್ಲಿ ಶ್ರಮ ಸಮಾಜ ಪಾರ್ಟಿ ಎಂಬ ಪ್ರಾದೇಶಿಕ ಪಕ್ಷ ಸ್ಥಾಪನೆ ಮಾಡಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಎ.ಟಿ.ಕೃಷ್ಣನ್ ತಿಳಿಸಿದರು.

Advertisement

ವಿಶೇಷವಾಗಿ ಕನ್ನಡಿಗರ ಸಮಸ್ಯೆ ಸವಾಲುಗಳಿಗೆ ಧ್ವನಿಯಾಗಲು ಪ್ರಾದೇಶಿಕ ಪಕ್ಷದ ಗುರಿಯಾಗಿದ್ದು 2028ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಪಕ್ಷ ಸಜ್ಜಾಗಲಿದೆ ಎಂದರು.

ಕನ್ನಡಿಗರ ಅಸ್ಮಿತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಪಕ್ಷ ಕೆಲಸ ಮಾಡಲಿದೆ. ಜ.31 ರಂದು ಪುನೀತ್ ಸಮಾಧಿ ಬಳಿ ಪ್ರಮಾಣ ವಚನ ಸ್ಪೀಕರಿಸಿ ರಾಜ್ಯಾದ್ಯಂತ ಪ್ರವಾಸ ನಡೆಸಿ ಪಕ್ಷ ಸಂಘಟನೆ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next