Advertisement

Chikkaballapur: ಅನಕ್ಷರಸ್ಥ ಗ್ರಾಪಂ ಸದಸ್ಯರಿಗೆ ಸಾಕ್ಷರ ಸನ್ಮಾನ

11:03 AM Dec 16, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧ ಗ್ರಾಪಂಗಳಿಗೆ ಚುನಾ ವಣೆ ಮೂಲಕ ಆಯ್ಕೆಗೊಂಡು ಕೆಲಸ ಮಾಡುತ್ತಿರುವ ಬರೋಬ್ಬರಿ 305 ಮಂದಿ ಗ್ರಾಪಂ ಸದಸ್ಯರಿಗೆ ಕನಿಷ್ಟ ಓದು, ಬರಹ ಗೊತ್ತಿಲ್ಲದೇ ಸಂಪೂರ್ಣ ಅನಕ್ಷರಸ್ಥರಾಗಿರು ವುದು ಜಿಲ್ಲೆಯ ವಯ ಸ್ಕರ ಶಿಕ್ಷಣ ಇಲಾಖೆ ನಡೆ ಸಿದ ಸಮೀಕ್ಷೆ ಕಾರ್ಯದಲ್ಲಿ ಬೆಳಕಿಗೆ ಬಂದಿದೆ.

Advertisement

ಜಿಲ್ಲೆಯ 157 ಗ್ರಾಪಂಗಳಿಗೆ ಆಯ್ಕೆಗೊಂಡಿರುವ ಸದಸ್ಯರ ಶೈಕ್ಷಣಿಕ ವಿದ್ಯಾಭ್ಯಾಸದ ಬಗ್ಗೆ ಸಮೀಕ್ಷೆ ನಡೆಸಿದಾಗ 305 ಗ್ರಾಪಂ ಸದಸ್ಯರಿಗೆ ಅಕ್ಷರದ ಅರಿವು ಇಲ್ಲದೇ ಇರುವುದು ಕಂಡು ಬಂದಿದ್ದು, ಆ ಪೈಕಿ ಚಿಂತಾಮಣಿ, ಬಾಗೇಪಲ್ಲಿ ಹಾಗೂ ಗೌರಿಬಿದನೂರಲ್ಲಿ ಅತಿ ಹೆಚ್ಚು ಅನಕ್ಷರಸ್ಥ ಗ್ರಾಪಂ ಸದಸ್ಯರು ಪತ್ತೆಯಾಗಿದ್ದಾರೆ.

ಸಾಕ್ಷರ ಸನ್ಮಾನ: ಜಿಲ್ಲೆಯ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತ, ನೀತಿ ನಿರೂಪಣೆ ಯಲ್ಲಿ ಮಹತ್ತರ ಪಾತ್ರ ವಹಿಸುವ ಗ್ರಾಪಂ ಸದಸ್ಯರಿಗೆ ಓದು ಬರಹವೇ ಗೊತ್ತಿಲ್ಲದಂತಾಗಿದ್ದು, ಸದ್ಯ ಜಿಲ್ಲೆಯಲ್ಲಿ ಕನಿಷ್ಠ ಸಾಕ್ಷರತೆ ಇಲ್ಲದೇ 305 ಗ್ರಾಪಂ ಸದಸ್ಯರನ್ನು ಸಾಕ್ಷರರನ್ನಾಗಿ ಸುವ ದಿಕ್ಕಿನಲ್ಲಿ ಸಾಕ್ಷರ ಸನ್ಮಾನ ಕಾರ್ಯ ಕ್ರಮ ಅನುಷ್ಠಾನಕ್ಕೆ ಜಿಲ್ಲಾದ್ಯಂತ ವಯಸ್ಕರ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಗ್ರಾಪಂಗಳ ಅನಕ್ಷರಸ್ಥ ಸದಸ್ಯರನ್ನು ಗುರುತಿಸಿ ಅವರಿಗೆ ಓದು, ಬರಹ, ಮತ್ತು ಲೆಕ್ಕಾಚಾರದಲ್ಲಿ ಕನಿಷ್ಟ ಸ್ವಾವಲಂಬನೆ ತರುವ ದಿಸೆಯಲ್ಲಿ ರಾಷ್ಟ್ರೀಯ ಗ್ರಾಮ ಸ್ವರಾಜ್‌ ಅಭಿ ಯಾನ ದಡಿ ಯಲ್ಲಿ ರಾಜ್ಯದ ಅಬ್ದುಲ್‌ ನಜೀರ್‌ ಸಾಬ್‌ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಡಿ.26 ರಿಂದ ಸಾಕ್ಷರ ಸನ್ಮಾನ ಎಂಬ ವಿಶೇಷ ಕಲಿಕಾ ಕಾರ್ಯಕ್ರಮ ರೂಪಿಸಿ ಅನುಷ್ಠಾನಕ್ಕೆ ಮುಂದಾಗಿದೆ.

ಕಲಿಕೆ ಬಳಿಕ ಮೌಲ್ಯಮಾಪನ: ಅನಕ್ಷರಸ್ಥ ಗ್ರಾಪಂ ಸದಸ್ಯರಿಗೆ ನಡೆಯುವ ಸಾಕ್ಷರ ಸನ್ಮಾನ ತರಬೇತಿ ವೇಳೆ ಮೌಲ್ಯಮಾಪನ ಸಹ ನಡೆಯಲಿದೆ. 5 ಪಾಠಗಳಿಗೆ ಒಮ್ಮೆ ಸ್ವ ಮೌಲ್ಯಮಾಪನ, 15 ಪಾಠಗಳ ನಂತರ ಅಂತರಿಕ ಮೌಲ್ಯಮಾಪನ ನಡೆದರೆ ಆಯಾ ಜಿಲ್ಲೆಗಳ ಡಯಟ್‌ ಮೂಲಕ ಅಂತಿಮ ಮೌಲ್ಯಮಾಪನ ನಡೆಯಲಿದೆ. ಅನಕ್ಷರಸ್ಥ ಗ್ರಾಪಂ ಸದಸ್ಯರು ಸಾಕ್ಷರರಾಗಿ ಪಂಚಾಯಿತಿ ಚಟುವಟಿಕೆಗಳಲ್ಲಿ, ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸಾಕ್ಷರ ಸನ್ಮಾನ ಕಾರ್ಯಕ್ರಮ ಅನಕ್ಷರಸ್ಥ ಗ್ರಾಪಂ ಸದಸ್ಯರಿಗೆ ರೂಪಿಸಿದೆ.

ಬೋಧಕರಿಗೆ ಎರಡು ಹಂತದಲ್ಲಿ ತರಬೇತಿ: ರಾಜ್ಯದ 21 ಜಿಲ್ಲೆಗಳಲ್ಲಿ ಡಿ.26 ರಿಂದ ಸಾಕ್ಷರ ಸನ್ಮಾನ ಕಾರ್ಯಕ್ರಮದ ಮೂಲಕ 4,078 ಮಂದಿ ಅನಕ್ಷರಸ್ಥ ಗ್ರಾಪಂ ಸದಸ್ಯರಿಗೆ ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಸಂಸ್ಥೆ ಸಹಯೋಗ ದೊಂದಿಗೆ ತರಬೇತಿ ಪಡೆದ ಬೋಧಕರಿಂದ ತರಬೇತಿ ಸಿಗಲಿದೆ. ಈಗಾಗಲೇ ಇದರ ಸಂಬಂಧ ವಿಶೇಷವಾಗಿ ಸಾಕ್ಷರ ಸಂದೇಶ ಪಠ್ಯ ರಚನೆ ಜೊತೆಗೆ ಅನಕ್ಷರಸ್ಥ ಗ್ರಾಪಂ ಸದಸ್ಯರಿಗೆ ಅಕ್ಷರ ಕಲಿಸುವ ದಿಕ್ಕಿನಲ್ಲಿ ಈ ಹಿಂದೆ ಸಕ್ಷರತಾ ಕಾರ್ಯಕ್ರಮದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ಹಾಗೂ ನಿವೃತ್ತ ಶಿಕ್ಷಕರು, ಗ್ರಾಪಂ ಗ್ರಂಥಪಾಲಕರು, ವಯಸ್ಕರ ಕಲಿಕೆ-ಬೋಧನೆಯಲ್ಲಿ ಅನುಭವ ಇರುವರನ್ನು ಸಾಕ್ಷರ ಸನ್ಮಾನ ಕಾರ್ಯಕ್ರಮದಡಿ ಬೋಧಕರಾಗಿ ಗುರುತಿಸಿ ಅವರಿಗೆ ತರಬೇತಿ ನೀಡಲಾಗಿದೆ.

Advertisement

50 ದಿನ, 100 ಗಂಟೆ ತರಬೇತಿ: ಗ್ರಾಪಂಗಳಲ್ಲಿರುವ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಸಾಕ್ಷರ ಸನ್ಮಾನ ಕಾರ್ಯಕ್ರಮವನ್ನು ಕನಿಷ್ಠ 100 ಗಂಟೆಗಳ ತರಬೇತಿಗೆ ಯೋಜನೆ ರೂಪಿಸ ಲಾ ಗಿದೆ. ದಿನಕ್ಕೆ 2 ಗಂಟೆಯಂತೆ ಒಟ್ಟು 50 ದಿನಗಳಲ್ಲಿ ಒಬ್ಬರಿಂದ ಒಬ್ಬರಿಗೆ ಕಲಿಸುವ ವಿಧಾನವನ್ನು ಯೋಜನೆಯಡಿ ರೂಪಿಸಲಾಗಿದೆ. ಈಗಾಗಲೇ ಬೋಧಕರಿಗೆ 3 ದಿನಗಳ ಕಾಲ ಪಠ್ಯಧಾರಿತ ತರಬೇತಿಯನ್ನು ಸಹ ನೀಡಲಾಗಿದೆ. ವಿಶೇಷವಾಗಿ ಆರೋಗ್ಯ, ಪರಿಸರ, ನಾಯಕತ್ವ, ಸಹಕಾರ, ಸಮುದಾಯ ಸಹಭಾಗಿತ್ವ ಮತ್ತಿತರ ವಿಷಯಗಳ ಕುರಿತು ಅನಕ್ಷರಸ್ಥ ಗ್ರಾಪಂ ಸದಸ್ಯರಿಗೆ ಕಲಿಸಲು ಪ್ರತಿ ಗ್ರಾಪಂ ಸದಸ್ಯರೊಬ್ಬರಿಗೆ ಒಬ್ಬ ಬೋಧಕರನ್ನು ನೇಮಿಸಿದ್ದು, ಅವರಿಗೆ ಎರಡು ಹಂತದಲ್ಲಿ ವಿಶೇಷ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 305 ಗ್ರಾಪಂ ಸದಸ್ಯರು ಅನಕ್ಷರಸ್ಥರಿದ್ದು ಅವರಿಗೆ ಓದು, ಬರಹ ಹಾಗೂ ಕನಿಷ್ಠ ಲೆಕ್ಕಾಚಾರ ಕಲಿಸುವ ನಿಟ್ಟಿನಲ್ಲಿ ಸಾಕ್ಷರ ಸನ್ಮಾನ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ ಅನಕ್ಷರಸ್ಥ ಗ್ರಾಪಂ ಸದಸ್ಯರನ್ನು ಗುರುತಿಸಿ ಅವರಿಗೆ ಬೋಧನೆ ಮಾಡುವ ಬೋಧಕರಿಗೂ ಎರಡು ಹಂತದಲ್ಲಿ ತರಬೇತಿ ನೀಡಲಾಗಿದೆ. 50 ದಿನಗಳ ಕಾಲ ಪ್ರತಿ ದಿನ 2 ಗಂಟೆಯಂತೆ ಒಟ್ಟು 100 ಗಂಟೆಗಳ ತರಬೇತಿ ನೀಡುವ ಮೂಲಕ ಅವರನ್ನು ಸಾಕ್ಷರರನ್ನಾಗಿಸುವ ಕಾರ್ಯವನ್ನು ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಆಂಜನೇಯ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next