Advertisement

ಚಿಕ್ಕಬಳ್ಳಾಪುರ ‌ನೂತನ ಎಸ್ ಪಿಯಾಗಿ ಮಿಥುನ್ ಕುಮಾರ್ ಅಧಿಕಾರ ಸ್ವೀಕಾರ

12:26 PM Mar 19, 2020 | keerthan |

ಚಿಕ್ಕಬಳ್ಳಾಪುರ: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜಿ.ಕೆಮಿಥುನ್ ಕುಮಾರ್ ಗುರುವಾರ ಅಧಿಕಾರ ಸ್ವೀಕರಿಸಿದರು.

Advertisement

ಈ ಹಿಂದೆ‌ ಮಿಥುನ್ ಕುಮಾರ್ ಉಡುಪಿ ಜಿಲ್ಲೆಯ‌ ಕಾರ್ಕಳದ ನಕ್ಸಲ್ ನಿಗ್ರಹ ಪಡೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಜಿಲ್ಲೆಯ ಎಸ್ ಪಿಯಾಗಿದ್ದ ಅಭಿನವ ಖರೆರನ್ನು ಕೇಂದ್ರ‌ ಸರ್ಕಾರ ಸಿಬಿಐ ಸೇವೆಗೆ ನಾಲ್ಕು ವರ್ಷಗಳ ಕಾಲ ನಿಯೋಜಿಸಿದ್ದರಿಂದ ತೆರೆವಾದ ಹುದ್ದೆಗೆ ರಾಜ್ಯ‌ ಸರ್ಕಾರ ಬುಧವಾರವಷ್ಟೆ‌ ಮಿಥುನ್ ಕುಮಾರ್ ನ್ನು ಜಿಲ್ಲೆಯ‌ ಎಸ್ ಪಿಯಾಗಿ ವರ್ಗಾವಣೆ ಮಾಡಿತ್ತು.

ಇಂದು ನಗರದ ಹೊರ ವಲಯದ ಅಣಕನೂರು ಸಮೀಪ ಇರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಪ್ರಭಾರಿ ಎಸ್ ಪಿ ಜಾಹ್ನವಿ ಅಧಿಕಾರ ಹಸ್ತಾಂತರ ಮಾಡಿದರು. ಈ ವೇಳೆ‌ ಜಿಲಾ ಪೊಲೀಸ್ ವೃಂದ ನೂತನ ಎಸ್ ಪಿಗೆ‌ ಗೌರವ ವಂದನೆ ಸಲ್ಲಿಸಿ ಆತ್ಮೀಯವಾಗಿ‌ ಜಿಲ್ಲೆಗೆ ಬರಮಾಡಿ ಕೊಂಡಿತು. ಜಿಲ್ಲೆಯ ಹಿರಿಯ ‌ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next