Advertisement

Cm siddaramaiah: ರಾಜ್ಯದ ಹಾಕಿ ಸಿಬಂದಿಗೆ ಮುಖ್ಯಮಂತ್ರಿ ಅಭಿನಂದನೆ

10:48 PM Aug 10, 2024 | Team Udayavani |

ಬೆಂಗಳೂರು: ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಭಾರತೀಯ ಪುರುಷರ ಹಾಕಿ ತಂಡದ ಸಿಬಂದಿಯಾಗಿದ್ದ ಬೆಂಗಳೂರಿನ ಹರ್ಷಿತ್‌ ಎಂ.ಎಲ್‌. ಹಾಗೂ ರಂಗನಾಥನ್‌ ಎಂ. ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.

Advertisement

ಈ ಬಗ್ಗೆ ಟ್ವೀಟ್‌ ಮಾಡಿರುವ ಸಿಎಂ, “ಭಾರತೀಯ ಹಾಕಿ ತಂಡದ ಒಲಿಂಪಿಕ್‌ ಕಂಚಿನ ಪದಕ ಗೆಲುವಿನಲ್ಲಿ ಗಮನಾರ್ಹ ಕೊಡುಗೆ ನೀಡಿದ ಬೆಂಗಳೂರಿನ ಹರ್ಷಿತ್‌ ಎಂ.ಎಲ್‌. ಮತ್ತು ರಂಗನಾಥನ್‌ ಎಂ. ಅವರಿಗೆ ಅಭಿನಂದನೆಗಳು. ತರಬೇತುದಾರರಾಗಿ ಹರ್ಷಿತ್‌ ಅವರ ಪರಿಣತಿ ಮತ್ತು ಮುಖ್ಯ ಫಿಸಿಯೋಥೆರಪಿಸ್ಟ್‌ ಆಗಿ ರಂಗನಾಥನ್‌ ಅವರ ಸಮರ್ಪಣೆ ಈ ಐತಿಹಾಸಿಕ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಿಮ್ಮ ಬದ್ಧತೆ ಮತ್ತು ಉತ್ಕೃಷ್ಟತೆಯ ಬಗ್ಗೆ ಕರ್ನಾಟಕ ಹೆಮ್ಮೆ ಪಡುತ್ತದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next