Advertisement

ಮುಖ್ಯಮಂತ್ರಿ ಖಡಕ್‌ ವಾರ್ನಿಂಗ್‌ಗೆ ಬಹುತೇಕ ರಸ್ತೆಗಳೀಗ ಗುಂಡಿಮುಕ್ತ

11:41 AM Oct 30, 2017 | Team Udayavani |

ಬೆಂಗಳೂರು: ನಗರದಲ್ಲಿ ರಸ್ತೆಗಳನ್ನು ಗುಂಡಿಮುಕ್ತಗೊಳಿಸುವಂತೆ ಮುಖ್ಯಮಂತ್ರಿಗಳು ಆದೇಶಿಸಿದ ಮೇರೆಗೆ ಶೀಘ್ರ ದುರಸ್ತಿ ಕಾರ್ಯ ನಡೆಸಿದ್ದು, ನಗರದ ಬಹುತೇಕ ರಸ್ತೆಗಳು ಗುಂಡಿಮುಕ್ತವಾಗಿವೆ ಎಂದು ಬಿಬಿಎಂಪಿ ತಿಳಿಸಿದೆ.

Advertisement

ಇತ್ತಿಚೆಗೆ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದವು. ಇದರಿಂದಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಜತೆಗೆ ಕೆಲವೆಡೆ ಗುಂಡಿ ತಪ್ಪಿಸಲು ಹೋಗಿ ಅಪಘಾತಕ್ಕೊಳಗಾಗಿ ಕೆವರು ಸಾವಿಗೀಡಾದ ಪ್ರಕರಣಗಳು ನಡೆದವು. ಆ ಹಿನ್ನೆಲೆ ಮುಖ್ಯಮಂತ್ರಿಗಳು ನಗರದಲ್ಲಿ ರಸ್ತೆಗುಂಡಿಗಳನ್ನು 15 ದಿನಗಳಲ್ಲಿ ಮುಚ್ಚುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದರು. 

ಆ ಹಿನ್ನೆಲೆಯಲ್ಲಿ ನಗರದಲ್ಲಿ ಸೃಷ್ಟಿಯಾಗಿದ್ದ 36 ಸಾವಿರ ಗುಂಡಿಗಳನ್ನು ದುರಸ್ತಿಪಡಿಸಲು ಮುಂದಾಗಿದ್ದ ಸಿಬ್ಬಂದಿ, ಅದರಂತೆ 16 ಸಾವಿರ ಮುಚ್ಚುವುದರೊಳಗೆ ಮತ್ತೆ ಭಾರೀ ಮಳೆ ಬಂದ ನಂತರ ಹೆಚ್ಚುವರಿಯಾಗಿ ನಗರದಲ್ಲಿ 5 ಸಾವಿರ ಗುಂಡಿಗಳು ಸೃಷ್ಟಿಯಾಗಿದ್ದವು. ಹಗಲು ರಾತ್ರಿ ಕಾಮಗಾರಿ ನಡೆಸಿದ ಪಾಲಿಕೆಯ ಸಿಬ್ಬಂದಿ ಬಹುತೇಕ ರಸ್ತೆಗಳಲ್ಲಿನ ಗುಂಡಿಗಳನ್ನು ದುರಸ್ತಿಗೊಳಿಸಿದ್ದು, ಇನ್ನು ಕೇವಲ 689 ರಸ್ತೆಗುಂಡಿಗಳು ಮಾತ್ರ ಬಾಕಿ ಉಳಿದಿವೆ. 

ಅ. 30ರ ವೇಳೆಗೆ ನಗರದಲ್ಲಿ ಸುಮಾರು 4121 ಗುಂಡಿಗಳ ದುರಸ್ತಿ ಕಾರ್ಯ ಬಾಕಿಯಿತ್ತು. ಕಳೆದೊಂದು ವಾರದಲ್ಲಿ ಸುಮಾರು 3500 ಸಾವಿರ ರಸೆ ¤ ಗುಂಡಿಗಳನ್ನು ಪಾಲಿಕೆಯ ಸಿಬ್ಬಂದಿ ದುರಸ್ತಿಗೊಳಿಸಿದ್ದು, ಪಾಲಿಕೆಯಲ್ಲಿ ಕೇವಲ 689 ಗುಂಡಿಗಳ ದುರಸ್ತಿ ಕಾರ್ಯ ಮಾತ್ರ ಬಾಕಿಯಿರುವ ಕುರಿತು ಪ್ರತಿವಾರ ಪಾಲಿಕೆಯ ಆಯುಕ್ತರಿಗೆ ನೀಡುವ ವರದಿಯಲ್ಲಿ ತಿಳಿಸಲಾಗಿದೆ. 

ಹೆಚ್ಚುವರಿ ಅನುದಾನ ನೀಡಿಲ್ಲ: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಯಿಂದ ಸೃಷ್ಟಿಯಾಗಿದ್ದ ಗುಂಡಿಗಳ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಳಿಸಲಾಗಿದ್ದು, ರಸ್ತೆಗಳ ನಿರ್ವಹಣೆ ಮುಗಿದಿರುವ ರಸ್ತೆಗಳಿಗೆ ಮಾತ್ರ ಪಾಲಿಕೆಯಿಂದ ಅನುದಾನ ನೀಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. 

Advertisement

ಗುತ್ತಿಗೆದಾರರು ಸಮರ್ಪಕವಾಗಿ ರಸ್ತೆಗಳು ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಗುಂಡಿಗಳು ಸೃಷ್ಟಿಯಾಗಿವೆ. ಇದರೊಂದಿಗೆ ಕೆಲವೊಂದು ಕಡೆಗಳಲ್ಲಿ ರಸ್ತೆ ನಿರ್ವಹಣೆಯ ಅವಧಿಯಿದ್ದರೂ ಹಣ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆ ಹಿನ್ನೆಲೆಯಲ್ಲಿ ಯಾವ ರಸ್ತೆಗಳು ನಿರ್ವಹಣೆಯಲ್ಲಿವೆ ಎಂಬ ವಲಯವಾರು ಮಾಹಿತಿಯನ್ನು ಪಾಲಿಕೆಯ ಅಧಿಕಾರಿಗಳು ಪಾಲಿಕೆಯ ವೆಬ್‌ಸೈಟ್‌ಗೆ ಹಾಕಿದ್ದಾರೆ. 

ಗುತ್ತಿಗೆದಾರರಿಂದ 530 ಕಿ.ಮೀ. ನಿರ್ವಹಣೆ: ಬಿಬಿಎಂಪಿ ಎಂಟೂ ವಲಯಗಳಲ್ಲಿ ಒಟ್ಟು 530 ಕಿಲೋ ಮೀಟರ್‌ ಉದ್ದದ ರಸ್ತೆಗಳ ನಿರ್ವಹಣಾ ಅವಧಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಆ ರಸ್ತೆಗಳಲ್ಲಿ ಸೃಷ್ಟಿಯಾಗಿರುವ ರಸ್ತೆಗುಂಡಿಗಳ ದುರಸ್ತಿಗಾಗಿ ಪಾಲಿಕೆಯಿಂದ ಯಾವುದೇ ರೀತಿಯ ಅನುದಾನ ಬಿಡುಗಡೆ ಮಾಡಿಲ್ಲ. ಬದಲಾಗಿ ನಿರ್ವಹಣಾ ಅವಧಿ ಪೂರ್ಣಗೊಂಡ ರಸ್ತೆಗಳಲ್ಲಿನ ತುರ್ತು ಕಾಮಗಾರಿಗಾಗಿ ಮಾತ್ರ ಪಾಲಿಕೆಯಿಂದ ಹಣ ನೀಡಲಾಗಿದೆ ಎಂದು ಪಾಲಿಕೆಯ ಮುಖ್ಯ ಎಂಜಿನಿಯರ್‌ ತಿಳಿಸಿದ್ದಾರೆ. 

ಆಯುಕ್ತರಿಂದ ಮೆಚ್ಚುಗೆ
ರಸ್ತೆಗುಂಡಿ ಮುಚ್ಚಲು ಮುಖ್ಯಮಂತ್ರಿಗಳು ಗಡುವು ನೀಡಿದ ದಿನದಿಂದ ನಿತ್ಯ ಪಾಲಿಕೆಯ ಅಧಿಕಾರಿಗಳು ಎಲ್ಲಿ? ಎಷ್ಟು? ಗುಂಡಿಗಳನ್ನು ಮುಚ್ಚಿದ್ದಾರೆ ಹಾಗೂ ಎಲ್ಲಿ ಮುಚ್ಚಬೇಕು ಮಾಹಿತಿ ನೀಡುವ “ಆಪರೇಷನ್‌ ಗುಂಡಿ’ ಎಂಬ ವಿಶೇಷ ಕಾಲಂನ್ನು “ಉದಯವಾಣಿ’ ಆರಂಭಿಸಿತ್ತು. “ಉದಯವಾಣಿ’ ಈ ವಿಶೇಷ ಪ್ರಯತ್ನಕ್ಕೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ಕಾಲಂ ಕುರಿತು ಮಾತನಾಡಿದ ಅವರು, ನಾವು ಎಲ್ಲಿ ಗುಂಡಿ ಮುಚ್ಚುತ್ತಿದ್ದೇವೆ ಎಂಬ ಮಾಹಿತಿ ಸಾರ್ವಜನಿಕರಿಗೆ ನೀಡಿದ್ದೀರಾ. ಜತೆಗೆ ಜನರು ಕಳುಹಿಸುವ ಗುಂಡಿಗಳ ಫೋಟೋಗಳನ್ನು ವಿಳಾಸದೊಂದಿಗೆ ಪ್ರಕಟಿಸಿದ್ದು, ಗುಂಡಿಗಳನ್ನು ಮುಚ್ಚಲು ಪರೋಕ್ಷವಾಗಿ ಪಾಲಿಕೆಗೆ ಸಹಾಯವಾಗಿತ್ತು ಎಂದು ಹೇಳಿದ್ದಾರೆ.

ನಿರ್ವಹಣೆಯ ರಸ್ತೆಗಳ ವಲಯವಾರು ವಿವರ
ವಲಯ    ಕಿಲೋ ಮೀಟರ್‌
-ಪೂರ್ವ    60
-ಪಶ್ಚಿಮ    71
-ದಕ್ಷಿಣ    161
-ದಾಸರಹಳ್ಳಿà    13
-ಯಲಹಂಕ    19
-ರಾಜರಾಜೇಶ್ವರಿ ನಗರ    50
-ಮಹದೇವಪುರ    60
-ಬೊಮ್ಮನಹಳ್ಳಿ    96
-ಒಟ್ಟು    530

ನಿರ್ವಹಣಾ ಅವಧಿ ಮುಗಿಯದಿರುವ ರಸ್ತೆಗಳಲ್ಲಿನ ಗುಂಡಿ ದುರಸ್ತಿಯ ವೆಚ್ಚವನ್ನು ಗುತ್ತಿಗೆದಾರರೆ ಭರಿಸಬೇಕು. ಯಾವುದೇ ಕಾರಣಕ್ಕೂ ಹೆಚ್ಚುವರಿಯಾಗಿ ಅನುದಾನ ಬಿಡುಗಡೆ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಖ್ಯಮಂತ್ರಿಗಳು ನೀಡಿದ ಗಡುವಿನೊಳಗೆ ಗುಂಡಿಗಳ ದುರಸ್ತಿ ಕಾಮಗಾರಿ ನಡೆಸಲಾಗಿದ್ದು, ಡಾಂಬರೀಕರಣ ಮಾಡಲು ಉದ್ದೇಶಿಸಿರುವ ರಸ್ತೆಗಳಲ್ಲಿ ಮಾತ್ರ ತಾತ್ಕಾಲಿಕವಾಗಿ ಮುಚ್ಚಲಾಗಿದೆ.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next