Advertisement

ನ.26ರ ವರೆಗೆ ಚಿದು, ಪುತ್ರ ಅರೆಸ್ಟ್‌ ಇಲ್ಲ: ಪಟಿಯಾಲ ಕೋರ್ಟ್‌ ರಕ್ಷಣೆ

12:20 PM Nov 01, 2018 | Team Udayavani |

ಹೊಸದಿಲ್ಲಿ : ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಪಟಿಯಾಲಾ ನ್ಯಾಯಾಲಯ ಏರ್‌ಸೆಲ್‌ ಮ್ಯಾಕ್ಸಿಸ್‌ ಭ್ರಷ್ಟಾಚಾರದ ಪ್ರಕರಣದಲ್ಲಿ ನ.26ರ ವರೆಗೆ ಬಂಧನವಾಗದಂತೆ ರಕ್ಷಣೆ ನೀಡಿದೆ. 

Advertisement

ಚಿದಂಬರಂ ಅವರು ಮಾರ್ಚ್‌ 2006ರಲ್ಲಿ ಏರ್‌ಸೆಲ್‌ ಮ್ಯಾಕ್ಸಿಸ್‌ ಎಫ್ ಡಿ ಐ ಗೆ ಸಂಬಂಧಪಟ್ಟು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅನುಮೋದನೆ ನೀಡಿದ್ದಾಗಿ ಎಫ್ಐಪಿಬಿ ಆರೋಪಿಸಿದೆ. ನಿಯಮ ಪ್ರಕಾರ 600 ಕೋಟಿ ಮೀರುವ ಯಾವುದೇ ಎಪ್‌ ಡಿ ಐ ಪ್ರಸ್ತಾವಕ್ಕೆ ಅರ್ಥಿಕ ವ್ಯವಹಾರಗಳ ಕ್ಯಾಬಿನೆಟ್‌ ಸಮಿತಿ ಅನುಮೋದನೆ ನೀಡಬೇಕಾಗಿತ್ತು. 

ನಿನ್ನೆ ಬುಧವಾರ ಜಾರಿ ನಿರ್ದೇಶನಾಲಯವು ದಿಲ್ಲಿ ಕೋರ್ಟಿನಲ್ಲಿ ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯನ್ನು ವಿರೋಧಿಸಿತ್ತಲ್ಲದೆ ಅವರನ್ನು ಕಸ್ಟಡಿ ತನಿಖೆಗಾಗಿ ತನಗೆ ಒಪ್ಪಿಸುವಂತೆ ಒತ್ತಾಯಿಸಿತ್ತು. 

ಸಿಬಿಐ ಕೂಡ ಏರ್‌ಸೆಲ್‌ ಮ್ಯಾಕ್ಸಿಸ್‌ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದು ಇಂದು ಗುರುವಾರ ಅದು ಪಿ ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಗೆ ಕೋರ್ಟಿನಲ್ಲಿ ಉತ್ತರ ದಾಖಲಿಸಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next