Advertisement

ಜಿಲ್ಲಾ -ತಾಲೂಕುಗಳಲ್ಲಿ ಕೋಳಿ ಮರಿ ಸಾಕಣಿಕೆ ಕೇಂದ್ರ

06:20 AM Dec 03, 2017 | Team Udayavani |

ಬೆಂಗಳೂರು: ಕೆಎಂಎಫ್ ಮಾದರಿಯಲ್ಲಿ ಕೋಳಿ ಮರಿ ಸಾಕಣಿಕೆ ಕೇಂದ್ರಗಳನ್ನು ಜಿಲ್ಲಾ ಮತ್ತು ತಾಲೂಕುಗಳಲ್ಲಿ ಪ್ರಾರಂಭಿಸಲು ಕರ್ನಾಟಕ ಕುಕ್ಕುಟ ಮಹಾಮಂಡಳ ಯೋಜನೆ ರೂಪಿಸಿದೆ.

Advertisement

ಖಾಸಗಿ ಕಂಪನಿಗಳ ಕಪಿಮುಷ್ಟಿಯಿಂದ ರೈತರನ್ನು ರಕ್ಷಿಸುವ ಉದ್ದೇಶ ದಿಂದ ನೂತನ ಮಾರ್ಗ ಸೂಚಿಯನ್ನು ಸರಕಾರ ಅನುಷ್ಠಾನಕ್ಕೆ ತರುವ ಅಗತ್ಯತೆ ಇದೆ. ಹೀಗಾಗಿ, ಕುಕ್ಕುಟ ಮಂಡಳಿಯಿಯೇ ಕೋಳಿ ಮರಿ ಸಾಕಾಣಿಕೆ ಕೇಂದ್ರ ತೆರೆದು ಕೋಳಿ ಸಾಕಲು ಮುಂದಾಗುವವರಿಗೆ ನೆರವು ನೀಡಲಿದೆ ಎಂದು ಮಹಾಮಂಡಳ ಅಧ್ಯಕ್ಷ ಡಿ.ಕೆ.ಕಾಂತರಾಜ್‌, ಹೇಳಿದರು.

3ರಿಂದ 4 ಲಕ್ಷ ಕೋಳಿ ಸಾಕಾಣಿಕೆಗೆ ಮಂಡಳಿಯೇ ಪರವಾನಗಿ ನೀಡುವಂತಾಗಬೇಕು ಎಂಬುದಾಗಿ ರೈತ ಪರವಾದ ನಿಯಮಾವಳಿ ರೂಪಿಸಿದ್ದು, ಸರಕಾರಕ್ಕೆ ಸಲ್ಲಿಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next