Advertisement

ಚಿಕ್ಕಬಳ್ಳಾಪುರ: ರಾಶಿ ರಾಶಿಯಾಗಿ ಬಿದ್ದಿರುವ ಫಾರಂ ಕೋಳಿಮರಿಗಳಿಗಾಗಿ ಮುಗಿಬಿದ್ದ ಜನತೆ

02:49 PM Jan 09, 2021 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲೂ ಹಕ್ಕಿಜ್ವರದ ಭೀತಿ ಕಂಡುಬಂದ ನಡುವೆ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಫಾರಂ ಕೋಳಿ ಮರಿಗಳು ಯತೇಚ್ಚವಾಗಿ ಸಿಕ್ಕಿದ್ದು ಅವುಗಳನ್ನು ಗ್ರಾಮಸ್ಥರು ಸಿಕ್ಕ ಸಿಕ್ಕ ಚೀಲ ಪಾತ್ರಗಳಲ್ಲಿ ಮನೆಗಳಿಗೆ ಸಾಗಿಸಿದ ಘಟನೆ ನಡೆದಿದೆ.

Advertisement

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋಳಿ ಸಾಕಾಣಿಕೆ ಮಾಡುವ ರೈತರು ಹಾಗೂ ಫಾರಂ ಕೋಳಿ ಸರಬರಾಜು ಮಾಡುವ ಬಹುರಾಷ್ಟ್ರೀಯ ಕಂಪನಿಗಳ ಮಧ್ಯೆ ಜಗಳ ಮುಂದುವರೆದಿದ್ದು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಿರ್ಲಕ್ಷ್ಯ ವಹಿಸಿರುವುದನ್ನು ಪ್ರತಿರೋಧ ವ್ಯಕ್ತಪಡಿಸಿರುವ ಕೋಳಿ ಸಾಕಾಣಿಕೆದಾರರು ಪರವಾನಿಗೆ ರಹಿತವಾಗಿ ಬರುವ ವಾಹನವನ್ನು ನಿಲ್ಲಿಸಿ ಫಾರಂ ಕೋಳಿ ಮರಿಗಳನ್ನು ಅರಣ್ಯ ಪ್ರದೇಶದಲ್ಲಿ ಬಿಟ್ಟುಬಂದಿದ್ದು ಅದನ್ನು ನೋಡಿದ ಸುತ್ತಮುತ್ತಲಿನ ಗ್ರಾಮಾಸ್ಥರು ಬ್ಯಾಗ್, ಚೀಲ ಪ್ಲಾಸ್ಟೀಕ್‍ಗಳಲ್ಲಿ ಮನೆಗೆ ಕೊಂಡೊಯ್ದಿದ್ದಾರೆ.

ಜಿಲ್ಲೆಯ ಕಣಿತಹಳ್ಳಿ ಗ್ರಾಮದ ಬಳಿ ಇರುವ ಅರಣ್ಯ ಪ್ರದೇಶದಲ್ಲಿ ಹಿಂಡುಹಿಂಡು ಫಾರಂ ಕೋಳಿ ಮರಿಗಳನ್ನು ಕಂಡ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದರಲ್ಲದೆ ಪುಕ್ಕಟೆಯಾಗಿ ಸಿಕ್ಕಿದ ಕೋಳಿ ಮರಿಗಳನ್ನು ಸಾಗಿಸಿಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಬೈಕ್ ಗೆ ಜೆಸಿಬಿ ಢಿಕ್ಕಿಯಾಗಿ ಕಾರ್ಮಿಕ ಸಾವು: ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

Advertisement

ರಾಜ್ಯದಲ್ಲಿ ಫಾರಂ ಕೋಳಿ ಸಾಕಾಣಿಕೆದಾರ ರೈತರು ಹಾಗೂ ಚಿಕನ್‍ಗೆ ಕೋಳಿ ಸರಬರಾಜು ಮಾಡುವ ಬಹುರಾಷ್ಟ್ರೀಯ ಕಂಪನಿಗಳ ನಡುವೆ ಜಟಾಪಟಿ ನಡೆಯುತ್ತಿದ್ದು ಕಂಪನಿಗಳ ವಿರುದ್ದ ಸಾಕಾಣಿಕೆದಾರರು ಹೋರಾಟ ನಡೆಸುತ್ತಿದ್ದಾರೆ.

ಇತ್ತೀಚೆಗೆ ಸರ್ಕಾರದ ಮಟ್ಟದಲ್ಲಿ ಬೆಂಗಳೂರಿನ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಕೋಳಿ ಸಾಕಾಣಿಕೆ ಮಾಡುವ ರೈತರೊಂದಿಗೆ ಸಭೆ ನಡೆಸಿ ಸಮಸ್ಯೆಯನ್ನು ಇತ್ಯರ್ಥ ಮಾಡುವ ಭರವಸೆ ನೀಡಿದ್ದಾರೆ. ಆದರೆ ಕೋಳಿ ಸಾಕಾಣಿಕೆ ಮಾಡುವ ರೈತರು ಬಹುರಾಷ್ಟ್ರೀಯ ಕಂಪನಿಗಳ ಕೋಳಿ ಮರಿಗಳನ್ನು ಸಾಗಾಣಿಕೆ ಮಾಡುವ ವಾಹನಗಳನ್ನು ತಡೆದು ವಾಹನದಲ್ಲಿರುವ ಕೋಳಿ ಮರಿಗಳನ್ನು ಅರಣ್ಯ ಪ್ರದೇಶದಲ್ಲಿ ಬಿಡುವ ಕೆಲಸವನ್ನು ಮಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳ ಹಾಗೂ ಕಣಿತಹಳ್ಳಿ ಬಳಿ ಫಾರಂ ಕೋಳಿಗಳನ್ನು ಬಿಟ್ಟಿದ್ದು ಈ ವಿಚಾರವನ್ನು ಅರಿತ ಸುತ್ತಮುತ್ತಲಿನ ಗ್ರಾಮಾಸ್ಥರು ಫಾರಂ ಕೋಳಿಗಳನ್ನು ಸಾಗಾಸಿಕೊಂಡು ಹೋಗುವ ಕಾಯಕದಲ್ಲಿ ತೊಡಗಿದ್ದಾರೆ. ಕಳೆದ ಎರಡು ದಿನಗಳಿಂದ ಅರಣ್ಯ ಪ್ರದೇಶದಲ್ಲಿ ಜನಗಳಿಗೆ ಪುಕ್ಕಟೆ ಕೋಳಿ ಮರಿಗಳು ಲಭಿಸುತ್ತಿದ್ದು ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next